ಸವಣಾಲು: ದ. ಕ.ಜಿ. ಪಂ. ಸ. ಹಿ. ಪ್ರಾ. ಶಾಲೆ ಗುತ್ತಿನಬೈಲು ಇಲ್ಲಿ ದಾನಿಗಳಸಹಕಾರದಿಂದ ಎಲ್ಲಾ ಮಕ್ಕಳಿಗೆ ಉಚಿತ ಟೈ, ಬೆಲ್ಟ್, ಐಡಿಯನ್ನು ನ.2ರಂದು ವಿತರಿಸಲಾಯಿತು.
ಟೈ ಬೆಲ್ಟ್ ನ ಪ್ರಾಯೋಜಕತ್ವವನ್ನು ಮೊಹಮ್ಮದ್ ಮಿರ್ಷಾದ್ ಎಸ್. ಎಚ್. ಎ. ವುಡ್ ಡೆಕೋರೇಟಿವ್ ಅಂಡ್ ಪ್ಲೈವುಡ್ ಹಾಗೂ ಮೊಹಮ್ಮದ್ ಶರೀಫ್ , ಐಡಿ ಪ್ರಾಯೋಜಕತ್ವವನ್ನು ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಭೋಜಪೂಜಾರಿ ಹಾಗೂ ಸದಸ್ಯರಾದ ಪ್ರಭಾಕರ್ ಭಟ್ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಸಾರಥಿ ಪ್ರಶಸ್ತಿ ಪಡೆದ ಗುರುವಾಯನಕೆರೆ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾದ ರಾಜೇಶ್ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ದಲ್ಲಿ ಸಹ ಶಿಕ್ಷಕ ವಸಂತ ಗುಡಿಗಾರ್ ಸ್ವಾಗತವನ್ನು ಮಾಡಿದರು. ಪುರಸ್ಕೃತರ ಕಿರುಪರಿಚಯವನ್ನು ಅತಿಥಿ ಶಿಕ್ಷಕರಾದ ದಿನೇಶ್ ಕೆ, ಧನ್ಯವಾದ ಕಾರ್ಯಕ್ರಮವನ್ನು ಸಹ ಶಿಕ್ಷಕಿ ಶ್ಯಾಮಲಾ ಕೆ , ನಿರೂಪಣೆಯನ್ನು ನಮಿತಾ ಆರ್ ನಿರ್ವಹಿಸಿದರು.
ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷರಾದ ಕೃಷ್ಣಪ್ಪ ಎಂ.ಕೆ. ಗುತ್ತಿನಬೈಲು ಅಂಗನವಾಡಿ ಕಾರ್ಯಕರ್ತೆ ಯಾದ ಸುಮಂಗಲ ಹಾಜರಿದ್ದರು.