ಪೆರಿಂಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಹತ್ತನೇ ವರ್ಷದ ಪಾದಯಾತ್ರೆಯ ಪೂರ್ವಭಾವಿ ಸಭೆಯು ಹೊಸಂಗಡಿ ವಲಯದ ಪೆರಿಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ನಡೆಸಲಾಯಿತು .
ಈ ಸಭೆಯಲ್ಲಿ ಹೊಸಂಗಡಿ ವಲಯದ ಅಧ್ಯಕ್ಷ ಸತೀಶ್ ಮಠ, ತಾಲೂಕು ಸಮಿತಿ ಸದಸ್ಯರಾದ ವಿದ್ಯಾನಂದ ಜೈನ್ ,ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ಪೂಜಾರಿ, ನಾರಾವಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಧರಣೇಂದ್ರ ಕುಮಾರ್, ಪೆರಾಡಿ ಸಿಎ ಬ್ಯಾಂಕಿನ ಅಧ್ಯಕ್ಷರಾದ ಸತೀಶ್ ಕಾಶಿಪಟ್ಣ ,ವೇಣೂರು ಸಿ ಎ ಬ್ಯಾಂಕಿನ ನಿರ್ದೇಶಕರಾದ ರಾಮದಾಸ್ ನಾಯಕ್ ,ವಲಯ ಮೇಲ್ವಿಚಾರಕರಾದ ವೀಣಾ ಹಾಗೂ ಸೇವಾ ಪ್ರತಿನಿಧಿಗಳು ಒಕ್ಕೂಟದ ಅಧ್ಯಕ್ಷರುಗಳು,ಪದಾಧಿಕಾರಿಗಳು, ಗ್ರಾಮ ಸಮಿತಿ ಅಧ್ಯಕ್ಷರುಗಳು, ವಿಪತ್ತು ನಿರ್ವಹಣಾ ಘಟಕದ ಸದಸ್ಯರುಗಳು ,ಸ್ವಚ್ಛತಾ ಸೇನಾನಿಗಳು ಉಪಸ್ಥಿತರಿದ್ದರು.