ಶ್ರೀ ಧ. ಮ. ಅ ಶಾಲೆ ಪುದುವೆಟ್ಟು ವಿನಲ್ಲಿ ಕನಕದಾಸ ಜಯಂತಿ

0

ಧರ್ಮಸ್ಥಳ:  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಶಾಲೆ ಪುದುವೆಟ್ಟು ವಿನಲ್ಲಿ ಕನಕದಾಸ ಜಯಂತಿ ಯನ್ನು ಶಾಲೆಯ ಮುಖ್ಯ ಶಿಕ್ಷಕರಾದ  ಶೀನಪ್ಪ ಗೌಡ ರವರ ಅಧ್ಯಕ್ಷತೆ ಯಲ್ಲಿ ಅರ್ಥ ಪೂರ್ಣವಾಗಿ ನ.11 ರಂದು ಆಚರಿಸಲಾಯಿತು.

ಮಕ್ಕಳಿಂದ ಕನಕದಾಸರ ಕೀರ್ತನೆ ಗಳನ್ನು ಹಾಡಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕರು ಕನಕದಾಸರ ಜೀವನ ಶೈಲಿಯನ್ನು ತಿಳಿಸಿ ದರು,ಶಾಲೆಯ ಹಿರಿಯ ಶಿಕ್ಷಕರಾದ  ಜೋಸೆಫ್ ರವರು ಕನಕದಾಸರು ಆಚರಿಸಿಕೊಂಡು ಬಂದ ಪದ್ದತಿ ಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮ ಮಕ್ಕಳ ಪ್ರಾರ್ಥನಾಗೀತೆಯೊಂದಿಗೆ ಆರಂಭವಾಯಿತು.  ಶೀಲಾ ರವರು ಸ್ವಾಗತಿಸಿದರು.  ಸೀಮಾ ರವರು ಧನ್ಯವಾದಗೈದ ಕಾರ್ಯಕ್ರಮವನ್ನು ಸುಜಾತಾ ನಿರೂಪಿಸಿದರು. ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here