ಪುತ್ತೂರು: 6 ನೇ ವರ್ಷದ ಬಾಂಧವ್ಯ ಟ್ರೋಪಿಯ ಪ್ರದರ್ಶನ ಪಂದ್ಯಾಟದಲ್ಲಿ ಪೊಲೀಸ್ ತಂಡ ಪ್ರಥಮ ಮತ್ತು ಸುದ್ದಿ ಬಿಡುಗಡೆ ರನ್ನರ್ಸ್ ಆಗಿದೆ.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಬೆಳಿಗ್ಗೆ ಬಾಂಧವ್ಯ ಟ್ರೋಪಿಯನ್ನು ಉದ್ಘಾಟಿಸಿದರು. ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಕೃಷ್ಣ ಭಟ್, ಸುದ್ದಿ ಸಮೂಹ ಸಂಸ್ಥೆಗಳ ಸಿಇಒ ಸೃಜನ್ ಊರುಬೈಲು, ಪ್ರಭಾರ ಡಿವೈಎಸ್ಪಿ ಧನ್ಯ ಕುಮಾರಿ, ಮಹಿಳಾ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್, ಉದ್ಯಮಿ ಸಹಜ್ ರೈ ಬಳಜ್ಜ, ಬಾಂಧವ್ಯ ಟ್ರೋಪಿಯ ಸ್ಕರೀಯ, ಫಾರೂಕ್ ಶೇಖ್, ಪ್ರಶಾಂತ್ ರೈ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆ, ಸಂಸ್ಥೆಗಳ ೧೮ ತಂಡ ಭಾಗವಹಿತ್ತು.