ಪುತ್ತೂರು: ಒಳಮೊಗ್ರು ಗ್ರಾಮದ ಮೊಡಪ್ಪಾಡಿಗುತ್ತು ತರವಾಡು ಮನೆ ಮತ್ತು ಶ್ರೀ ಜಠಾಧಾರಿ ಹಾಗೂ ಪರಿವಾರ್ ದೈವಗಳ ದೈವಸ್ಥಾನದಲ್ಲಿ ಶ್ರೀ ಜಠಾಧಾರಿ ದೈವದ ಮಹಿಮೆ ಹಾಗೂ ಪರಿವಾರ ದೈವಗಳ ನೇಮೋತ್ಸವವು ಫೆ.11 ಮತ್ತು 12 ರಂದು ಮೊಡಪ್ಪಾಡಿ ಗುತ್ತು ತರವಾಡು ಮನೆಯಲ್ಲಿ ನಡೆಯಲಿದ್ದು ಇದರ ಗೊನೆ ಮುಹೂರ್ತ ಕಾರ್ಯಕ್ರಮ ಫೆ.04 ರಂದು ನಡೆಯಿತು.ಈ ಸಂದರ್ಭದಲ್ಲಿ ದೈವಸ್ಥಾನದ ಮೊಕ್ತೇಸರ ತಿಮ್ಮಪ್ಪ ರೈ ಮೊಡಪ್ಪಾಡಿಗುತ್ತು, ಚಂದ್ರಶೆಟ್ಟಿ ಮೊಡಪ್ಪಾಡಿಗುತ್ತು, ಧೂಮಣ್ಣ ಶೆಟ್ಟಿ ಮೊಡಪ್ಪಾಡಿಗುತ್ತು, ಗುಡ್ಡಪ್ಪ ರೈ ಮೊಡಪ್ಪಾಡಿಗುತ್ತು, ಮಂಜುನಾಥ ರೈ ಮೊಡಪ್ಪಾಡಿಗುತ್ತು, ರಮೇಶ್ ರೈ ಮೊಡಪ್ಪಾಡಿ, ಬಾಲಕೃಷ್ಣ ರೈ ಪನಡ್ಕ, ಚಿದಾನಂದ ರೈ ಪನಡ್ಕ, ಹರಿಪ್ರಸಾದ್ ರೈ ಪನಡ್ಕ, ಶಶಿಧರ ರೈ ಮೊಡಪ್ಪಾಡಿಗುತ್ತು, ಸತೀಶ್ ಕುಮಾರ್ ರೈ, ದಯಾನಂದ ಶೆಟ್ಟಿ ಮೊಡಪ್ಪಾಡಿ, ಮಹೇಶ್ ರೈ ಮೊಡಪ್ಪಾಡಿ, ರಿತೇಶ್ ರೈ ಮೊಡಪ್ಪಾಡಿ, ಸಂತೋಷ್ ಕುಮಾರ್ ರೈ , ಜತ್ತಪ್ಪ ರೈ ಮೂಲೆಮೊಡಪ್ಪಾಡಿ, ರಾಘವ ಪೂಜಾರಿ, ವಿಠಲ ರೈ ಮೊಡಪ್ಪಾಡಿಗುತ್ತು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಫೆ.11 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ನಾಗತಂಬಿಲ, ಶ್ರೀ ವೆಂಕಟರಮಣ ದೇವರ ಹರಿಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಶ್ರೀ ಜಠಾಧಾರಿ ಹಾಗೂ ಪರಿವಾರ ದೈವಗಳ ಭಂಡಾರ ತೆಗೆಯುವುದು ಬಳಿಕ ಅನ್ನಸಂತರ್ಪಣೆ ಬಳಿಕ ಶ್ರೀ ಜಠಾಧಾರಿ ದೈವದ ಮಹಿಮೆ ನಡೆಯಲಿದೆ. ಫೆ.12 ರಂದು ಬೆಳಿಗ್ಗೆ ಪಂಜುರ್ಲಿ ದೈವದ ನೇಮ, ಮಧ್ಯಾಹ್ನ ಧೂಮಾವತಿ ದೈವದ ನೇಮ, ಸಂಜೆ ಪ್ರಾಂತಾಯ ಹಾಗೂ ಗುಳಿಗ ದೈವಗಳ ನೇಮ ನಡೆಯಲಿರುವುದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವದ ಗಂಧಪ್ರಸಾದ ಸ್ವೀಕರಿಸುವಂತೆ ದೈವಸ್ಥಾನದ ಆಡಳಿತ ಮೊಕ್ತೇಸರ ತಿಮ್ಮಪ್ಪ ರೈ ಮೊಡಪ್ಪಾಡಿಗುತ್ತು ಹಾಗೂ ಮೊಡಪ್ಪಾಡಿಗುತ್ತು ಕುಟುಂಬಸ್ಥರು ಹಾಗೂ ಬಂಧುಗಳ ಪ್ರಕಟಣೆ ತಿಳಿಸಿದೆ.