ಪುತ್ತೂರು; ಮರದ ಗೆಲ್ಲು ಕಡಿಯುತ್ತಿರುವಾಗ ಗೆಲ್ಲೊಂದು ಮೈಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಯುವಕ ಮೃತಪಟ್ಟ ಘಟನೆ ಸರ್ವೆ ಗ್ರಾಮದ ಕೂಡುರಸ್ತೆಯಲ್ಲಿ ನಡೆದಿದೆ. ಕೂಡು ರಸ್ತೆ ನಿವಾಸಿ ದಿ. ಹಸೈನಾರ್ ರವರ ಪುತ್ರ ಬಾತಿಷಾ (34) ಮೃತಪಟ್ಟ ಯುವಕ. ಪುರುಷರಕಟ್ಟೆಯ ಬಳಿ ಕಾರ್ಮಿಕರು ಮರದ ಗೆಲ್ಲು ಕಡಿಯುತ್ತಿರುವಾಗ ಅಲ್ಲೇ ನಿಂತುಕೊಂಡಿದ್ದ ಬಾತಿಷಾ ಅವ ಮೇಲೆ ಗೆಲ್ಲೊಂದು ಬಿದ್ದಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಅವರು ಮೃತಪಟ್ಟಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದ ಬಾತಿಷಾ ಟಿಂಬರ್ ಉದ್ಯಮಿಯಾಗಿದ್ದರು.