ವಿಟ್ಲ: ಬಜರಂಗದಳದ ವಿಟ್ಲ ಪ್ರಖಂಡದ ಕುಡ್ತಮುಗೇರಿನ ಸಂಚಾಲಕರಾಗಿದ್ದ ಕುದ್ರಿಯ ನಿವಾಸಿ ಗಣೇಶ್ ಪೂಜಾರಿ ರವರು ಅನಾರೋಗ್ಯದಿಂದಾಗಿ ಮಾ.3 ರಂದು ನಿಧನರಾದರು. ಗಣೇಶ್ ಪೂಜಾರಿ ರವರು ಬಜರಂಗದಳ ವಿಟ್ಲ ಪ್ರಖಂಡದ ಕುಡ್ತಮುಗೇರಿನ ಸಂಚಾಲಕರಾಗಿದ್ದು, ಸಂಘಟನಾತ್ಮಕ ಹೋರಾಟಗಳಲ್ಲಿ ಪ್ರಮುಖವಾಗಿ ಭಾಗಿಯಾಗುತ್ತಿದ್ದರು. ಮೃತರು ತಂದೆ, ತಾಯಿ, ಓರ್ವ ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.