ಪುತ್ತೂರು : ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವರ ಉತ್ಸವ ಸಮಯದಲ್ಲಿ ಉಪಯುಕ್ತವಾದ ಬಟ್ಟಲು ಕಾಣಿಕೆಯ ಪಾತ್ರೆ ಮತ್ತು ಪೀಠವನ್ನು ಉತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ಕುಮಾರ್ ಕತ್ರಿಬೈಲು ಮತ್ತು ಮನೆಯವರು ದೇವಳಕ್ಕೆ ಸಮರ್ಪಿಸಿದರು. ತಂತ್ರಿವರ್ಯರಿಗೆ ಮತ್ತು ಅರ್ಚಕರಿಗೆ ಪೂಜ ಸಮಯದಲ್ಲಿ ಆಸೀನಕ್ಕೆ ಉಪಯುಕ್ತವಾಗುವಂತೆ ಕೂರ್ಮಾಸನವನ್ನು ಸಂದೀಪ್ ಕಾರಂತ್ ಮತ್ತು ಮನೆಯವರು ದೇವಾಲಯಕ್ಕೆ ಕೊಡುಗೆಯಾಗಿ ನೀಡಿದರು. ಉತ್ಸವ ಸಮಿತಿ ಸದಸ್ಯರು, ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.