ಬೆಂಗಳೂರಿನಲ್ಲಿ ಜೆ.ಪಿ.ಅಸೋಸಿಯೇಟ್ಸ್ ವಕೀಲರ ಕಚೇರಿ ಶುಭಾರಂಭ

0

 

 

ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಪೆರುವಾಜೆ ಗ್ರಾಮದ ಯುವ ನ್ಯಾಯವಾದಿ ಜಯಪ್ರಕಾಶ್ ರೈ ಯವರ ನೂತನ ಕಚೇರಿಯು ಅ.14 ರಂದು ಶುಭಾರಂಭ ಗೊಂಡಿತು. ಬೆಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ವಿವೇಕ್ ಸುಬ್ಬ ರೆಡ್ಡಿ ಯವರು ಉದ್ಘಾಟಿಸಿದರು.

 

ಈ ಸಂದರ್ಭದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರು ,ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್ .ಅಂಗಾರ ರವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಜಯಪ್ರಕಾಶ್ ರವರು ಮೂಲತಃ ಸುಳ್ಯ ತಾಲೂಕಿನ ಪೆರುವಾಜೆಯವರಾಗಿದ್ದು ಕಳೆದ ಹಲವಾರು ವರ್ಷಗಳಿಂದ ಬೆಂಗಳೂರಿನ ವಿಜಯನಗರದಲ್ಲಿ ಕಚೇರಿ ಹೊಂದಿದ್ದು ವಕೀಲ ವೃತ್ತಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ.

LEAVE A REPLY

Please enter your comment!
Please enter your name here