ಚರಣ್ ನಡುಗಲ್ಲು ನಿಧನ

0

ನಾಲ್ಕೂರು ಗ್ರಾಮದ ನಡುಗಲ್ಲು ಶೇಷಪ್ಪ ನಾಯ್ಕರ ಪುತ್ರ ಚರಣ್ ನಡುಗಲ್ಲು ಹೃದಯಾಘಾತದಿಂದ ಅ.17 ರಂದು ನಿಧನರಾದರು. ಅವರಿಗೆ 22 ವರ್ಷ ವಯಸ್ಸಾಗಿತ್ತು.

ಸಂಜೆ ವೇಳೆ ಕೆಲಸದಲ್ಲಿ ತೊಡಗಿದ್ದಾಗ ಹೃದಯಾಘಾತದಿಂದ ಬಿದ್ದಿದ್ದರು. ಸ್ಥಳೀಯರು ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅದಾಗಲೆ ನಿಧನರಾಗಿದ್ದರೆನ್ನಲಾಗಿದೆ.

ಚರಣ್ ರವರು ಭಜರಂಗ ದಳದ ಛತ್ರ ಪತಿ ಶಿವಾಜಿ ಶಾಖೆ ನಡುಗಲ್ಲು ಇದರ ಸುರಕ್ಷಾ ಪ್ರಮುಖ್ ಆಗಿದ್ದರು.

ಮೃತರು ತಾಯಿ ಯಶೊದಾ, ಸಹೋದರರ ಚೇತನ್, ಸಹೋದರಿ  ಚೈತ್ರಾ, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here