ನೆಲ್ಯಾಡಿ: ಕಂದಾಯ ಇಲಾಖೆ ಹಮ್ಮಿಕೊಂಡಿರುವ ಮನೆ ಮನೆಗೆ ಕಂದಾ ದಾಖಲೆ ತಲುಪಿಸುವ ‘ ನಿಮ್ಮ ದಾಖಲೆ ನಿಮ್ಮ ಹಕ್ಕು, ಮನೆ ಬಾಗಿಲಿಗೆ ತಲುಪಿಸುವುದು ನಮ್ಮ ಕರ್ತವ್ಯ’ ಯೋಜನೆಗೆ ನೆಲ್ಯಾಡಿಯಲ್ಲಿ ರವಿಚಂದ್ರ ಗೌಡ ಹೊಸವೊಕ್ಲುರವರ ಮನೆಯಲ್ಲಿ ಮಾ.12ರಂದು ಚಾಲನೆ ನೀಡಲಾಯಿತು.
ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ಚೇತನಾ, ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಪ್ರಕಾಶ್ ರಾಮನಗರ, ಮಾಜಿ ಅಧ್ಯಕ್ಷ ಧರ್ಣಪ್ಪ ಹೆಗ್ಡೆ, ಕಡಬ ತಾಲೂಕು ಕಚೇರಿಯ ಸಿಬ್ಬಂದಿ ದಿನೇಶ್, ಗ್ರಾಮ ಸಹಾಯಕ ಚರಣ್, ಸುಪ್ರಿತಾ ರವಿಚಂದ್ರರವರು ಉಪಸ್ಥಿತರಿದ್ದರು.