ಪುತ್ತೂರು : ಶಾಂತಿಗೋಡು ಗ್ರಾಮದ ಶ್ರೀವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಎ.2 ಮತ್ತು 3ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ತೋಳ್ಪಾಡಿ, ರಾಮಕೃಷ್ಣ ಬಳ್ಳಕ್ಕುರಾಯ, ಎಸ್.ಪಿ.ನಾರಾಯಣ ಗೌಡ ಪಾದೆ, ಎಸ್.ಕೃಷ್ಣ ವಿಷ್ಣುನಗರ, ದೇವರಾಜ್ ಗೌಡ ಕಲ್ಕಾರು, ವಿಶ್ವನಾಥ ಬಲ್ಯಾಯ ಮುಂಡೋಡಿ, ಕೂಸಪ್ಪ ನಾಯ್ಕ ಬಿರ್ಮಣಕಜೆ, ಹರೀಶ್ ಗೌಡ ಕಂರ್ಬಡ್ಕ, ಶಿವಪ್ರಸಾದ್ ಕೃಂದಾಡಿ, ಅನಿಲ್ ಮುಂಡೋಡಿ, ಕೀರ್ತಿ ಕಲ್ಲಕೋಟೆ, ಅವಿಜ್ಞಾತ ಕೃಷ್ಣ ತೋಳ್ಪಾಡಿ, ವಿನೋದ್ ಕರ್ಪಿನಮೂಲೆ, ಜತ್ತಪ್ಪ ಗೌಡ ಕೃಂದಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.