ಶ್ರೀ ಶಾರದಾಂಭ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ ಪಂಜ ಶ್ರೀ ಶಾರದಾಂಬಾ ಸಭಾಭವನದಲ್ಲಿ ಅ.24 ರಂದು ಮಧ್ಯಾಹ್ನ ದೀಪ ಪ್ರಜ್ವಲನೆ ಗೊಂಡು ಆರಂಭ ಗೊಂಡಿತು.
ಕಾರ್ಯಕ್ರಮದಲ್ಲಿ ಗೋವಿಂದಯ್ಯ ಕಾಂಚೋಡು ದೀಪ ಪ್ರಜ್ವಲನೆ ಗೊಳಿಸಿ ಶುಭ ಹಾರೈಸಿದರು.ಟ್ರಸ್ಟ್ ನ ಅಧ್ಯಕ್ಷ ತಿಮ್ಮಪ್ಪ ಗೌಡ ಕೂತ್ಕುಂಜ ಸಭಾಧ್ಯಕ್ಷತೆ ವಹಿಸಿದ್ದರು.ಯಕ್ಷಮಣಿ ಗಿರೀಶ್ ಗಡಿಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಯರಾಮ ಕಲ್ಲಾಜೆ ಸ್ವಾಗತಿಸಿದರು ಮತ್ತು ವಂದಿಸಿದರು. ಬಳಿಕ
ಪ್ರಸಂಗ ‘ಶಲ್ಯ ಸಾರಥ್ಯ’ ತಾಳಮದ್ದಳೆ ಆರಂಭ ಗೊಂಡಿತು.
ಭಾಗವತರಾಗಿ ದೇವಿಪ್ರಸಾದ್ ಆಳ್ವ ತಲಪಾಡಿ , ಪ್ರಶಾಂತ್ ರೈ ಪಂಜ ,ರಚನಾ ಚಿದ್ಗಲ್
ಚೆಂಡೆ ಮತ್ತು ಮದ್ದಳೆ : ಚಂದ್ರಶೇಖರ್ ಗುರುವಾಯನಕೆರೆ ಮತ್ತು ಕುಮಾರ ಸುಬ್ರಹ್ಮಣ್ಯ
ವಳಕ್ಕುಂಜ ,
ಅರ್ಥಧಾರಿಗಳಾಗಿ ಉಜಿರೆ ಅಶೋಕ್ ಭಟ್,ರಾಧಾಕೃಷ್ಣ ಕಲ್ಚಾರ್ ,ವೆಂಕಟೇಶ್ ಪಾಲ್ಗೊಂಡಿದ್ದಾರೆ.