- ಎಪಿಎಲ್ ಕ್ರಿಕೆಟ್ ಪಂದ್ಯಾಟಕ್ಕೆ ಹರಾಜು ಮೂಲಕ ಕ್ರೀಡಾಪಟುಗಳ ಆಯ್ಕೆ
ಪುತ್ತೂರು: ವಕೀಲರ ಸಂಘದ ವತಿಯಿಂದ ವಕೀಲರ ಕ್ರೀಡಾಕೂಟ ಎಪ್ರಿಲ್ 2ರಂದು ದರ್ಬೆ ಸಂತಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದ್ದು ಅದರಲ್ಲಿ ವಿಶೇಷವಾಗಿ ವಕೀಲರ ಎಪಿಎಲ್ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು, ತಂಡದ ಕ್ರೀಡಾಪಟುಗಳನ್ನು ಹರಾಜು ಮೂಲಕ ಆಯ್ಕೆ ಪ್ರಕ್ರಿಯೆ ಮಾ.17ರಂದು ಪುತ್ತೂರು ವಕೀಲರ ಸಂಘದ ಪರಾಶರ ಹಾಲ್ನಲ್ಲಿ ನಡೆಯಿತು.
ಕ್ರಿಕೆಟ್ ತಂಡದ ಕ್ರೀಡಾಪಟುಗಳನ್ನು ಹರಾಜು ಪ್ರಕ್ರಿಯೆ ಮೂಲಕ ನಡೆದಿದ್ದು, ರಿಯಲ್ಪೈಟರ್ಸ್, ಬಾರ್ಲ್ಯಾನ್ಸ್, ಸಿಝಿಲರ್ ಸ್ಟ್ರೈಕರ್, ಅರ್ಜುನ್ವಾರಿಯರ್ಸ್ ತಂಡವು ಕ್ರೀಡಾಪಟುಗಳನ್ನು ಆಯ್ಕೆ ಮಾಡಿದರು.