ಕೆಯ್ಯೂರು : ಕೆಯ್ಯೂರು ಗ್ರಾಮದ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾ.24ರಂದು ಶ್ರೀ ದೇವಿಯ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ ಕೆಯ್ಯೂರು ಮಹಾದ್ವಾರ ಬಳಿ ತೆಂಗಿನಕಾಯಿ ಒಡೆಯುವ ಮೂಲಕ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ನಂತರ ಕೆಯ್ಯೂರು ದೇವಿನಗರದಿಂದ ಕೆಯ್ಯೂರು ದೇವಲಾಯದ ತನಕ ಶ್ರೀ ರಾಮ ಚೆಂಡೆ ಪುತ್ತೂರು ಲಕ್ಷ್ಮೀಬೆಟ್ಟ ಇವರಿಂದ ಭಕ್ತಾದಿಗಳು ನೀಡಿದ ಹೊರ ಕಾಣಿಕೆಯನ್ನು ಮೆರವಣಿಗೆಯಲ್ಲಿ ಸಾಗಿ ಪ್ರದಾನ ಅರ್ಚಕರಾದ ಶ್ರೀನಿವಾಸ ರಾವ್, ಆರತಿ ಬೆಳಗಿಸಿ ದೇವರಿಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಶ್ರೀನಿವಾಸ ರಾವ್, ರಾಮಣ್ಣ ಗೌಡ ಮಾಡಾವು, ಬಾಬು ಪಾಟಾಳಿ ದೇರ್ಲ, ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ, ವಿಶ್ವನಾಥ ಶೆಟ್ಟಿ ಸಾಗು, ಚರಣ್ ಕುಮಾರ್ ಸಣಂಗಳ, ಈಶ್ವರಿ ಜೆ ರೈ ಸಂತೋಷ್ ನಗರ, ಮಮತಾ ಎಸ್ ರೈ ಕೆಯ್ಯೂರು, ಕ್ಷೇತ್ರದ ಮಾಜಿ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಚೆನ್ನಪ್ಪ ರೈ ದೇರ್ಲ, ಸದಸ್ಯರುಗಳಾದ ಎನ್. ದಿವಾಕರ ರೈ ಸಣಂಗಲ, ಇ. ಸಂತೋಷ್ ಕುಮಾರ್ ರೈ ಇಳಾಂತಜೆ, ಕೆ. ಜಯಂತ ಪೂಜಾರಿ ಕೆಂಗುಡೇಲು, ಶ್ರೀ ದುರ್ಗಾ ಭಜನಾ ಮಂಡಳಿ ಅಧ್ಯಕ್ಷ ಬೇಬಿ ಪೂಜಾರಿ ದೇರ್ಲ, ಭಟ್ಯಪ್ಪ ರೈ ದೇರ್ಲ, ಬಾಲಕೃಷ್ಣ ರೈ ನೆಟ್ಟಾಳ, ಗಿರಿಯಪ್ಪ ಬೊಳಿಕಲ, ಗಣೇಶ್ ಭಟ್ ಕೈತ್ತಡ್ಕ, ಆನಂದ ಭಟ್, ಮಧುಸೂದನ್ ಭಟ್ ಕಜೆಮೂಲೆ,ಶ್ರೀ ಪತಿ ಭಟ್ ಕೆಯ್ಯೂರು, ಮೋಹನ್ ರೈ ಬೇರೀಕೆ, ಪ್ರಕಾಶ ರೈ ಬಳಕ್ಕ, ಅಶೋಕ ರೈ ದೇರ್ಲ, ವಿನೀತ್ ರೈ ದೇರ್ಲ, ಜಯರಾಮ ಶೆಟ್ಟಿ ಎಸ್ ಮೇಗಿನ ಮನೆ, ಎ .ಕೆ.ಜಯರಾಮ ರೈ ಕೆಯ್ಯೂರು, ಬಾಲಕೃಷ್ಣ ಪೂಜಾರಿ ಕೆಂಗುಡೇಲು, ಸೇಧು ಮಾಧವನ್ ನಂಬಿಯಾರ್, ಕೊರಗಪ್ಪ ರೈ ಸಣಂಗಲ, ದಿನೇಶ್ ಆಚಾರ್ಯ ಕೆಯ್ಯೂರು, ದಿಲೀಪ್ ಕೆ.ಎಸ್, ಸುರೇಂದ್ರ ರೈ ಇಳಾಂತಜೆ, ಬಾಸ್ಕರ ರೈ ಕೆಯ್ಯೂರು, ಚಂದ್ರಶೇಖರ ರೈ ಇಳಾಂತಜೆ,ರವಿ ಕುಮಾರ್ ಕೈತ್ತಡ್ಕ, ಶೇಶಪ್ಪ ದೇರ್ಲ, ಅಜಿತ್ ಕೆಯ್ಯೂರು, ಉದಯ ಸಂತೋಷ್ ನಗರ, ರಮಾನಾಥ ರೈ ಕೊಡಂಬು, ಕೃಷ್ಣಪ್ರಸಾದ್ ಪಲ್ಲತ್ತಡ್ಕ, ಚಿನ್ನಪ್ಪ ಗೌಡ, ಕೃಷ್ಣ ಸಾಮಾನಿ ಕೆಯ್ಯೂರು, ಆನಂದ ರೈ ದೇವಿನಗರ, ವಿಠ್ಠಲ ರೈ ಕೆಯ್ಯೂರು, ಪದ್ಮನಾಭ ರೈ ಇಳಾಂತಜೆ, ಅಶೋಕ ರೈ ದೇರ್ಲ, ಮಹಾಲಿಂಗ ಶೆಟ್ಟಿ ದೇವಿನಗರ, ದೇವಣ್ಣ, ವಿನಯ ಕುಮಾರ್ ಕೆಯ್ಯೂರು, ಕೊರಮ ಕೊಡಂಬು, ನಾರಾಯಣ ಪೂಜಾರಿ ಕಣಿಯಾರು, ಯಶವಂತ ಕೊಡಂಬು, ಹರೀಶ ಕೆಯ್ಯುರು, ಸತೀಶ್ ರೈ ದೇವಿನಗರ, ಆದರ್ಶ ರೈ ಕೆಯ್ಯೂರು, ವಸಂತ ರೈ ಸಣಂಗಲ, ಸಹಕರಿಸುವ ಸಂಘ ಸಂಸ್ಥೆಗಳು, ಹಾಗೂ ಊರ ಹತ್ತು ಸಮಸ್ತರು ಪಾಲ್ಗೊಂಡಿದ್ದರು.