ಪುತ್ತೂರು: ಜೇನು ಕೃಷಿಯ ರಾಜ್ಯಮಟ್ಟದ ತರಬೇತುದಾರ ನಿಡ್ಪಳ್ಳಿಯ ರಾಧಾಕೃಷ್ಣ ಆರ್. ಕೋಡಿಯವರನ್ನು ಮೂಲ್ಕಿ ಕೊಲ್ನಾಡಿನಲ್ಲಿ ನಡೆದ ರಾಜ್ಯಮಟ್ಟದ ಕೃಷಿ ಮೇಳ ‘ಕೃಷಿ ಸಿರಿ – 2022’ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಸನ್ಮಾನಿಸಿದರು. ಈ ವೇಳೆ ಮಂಗಳೂರು ತೋಟಗಾರಿಕಾ ಇಲಾಕೇಯ ಹಿರಿಯ ನಿರ್ದೇಶಕ ಪ್ರವೀಣ್, ಕೃಷಿ ಮೇಳದ ಅಧ್ಯಕ್ಷ ವಿಜಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.