ಕೆಮ್ಮಾಯಿ : ಡಿವೈಡರ್ ಹಾರಿ ಮುಂದಿನಿಂದ ಬರುತ್ತಿದ್ದ  ಮತ್ತೊಂದು ಕಾರಿಗೆ ಡಿಕ್ಕಿ : ನಾಲ್ವರು ಆಸ್ಪತ್ರೆಗೆ ದಾಖಲು

0

 ಪುತ್ತೂರು: ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ  ಘಟನೆ  ಮಾ. 27ರಂದು ಕೆಮ್ಮಾಯಿಯಲ್ಲಿ ನಡೆದಿದೆ.  ಪುತ್ತೂರು ಕಡೆಯಿಂದ  ಉಪ್ಪಿನಂಗಡಿ  ಕಡೆ ಹೋಗುತ್ತಿದ್ದ i20 ಕಾರು ನಿಯಂತ್ರಣ ತಪ್ಪಿ ಡಿವೈಡರ್  ಗೆ ಡಿಕ್ಕಿ ಹೊಡೆದು ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ  ಅಮರನಾಥ್  ಗೌಡ ಅವರ  i20 ಕಾರಿನ ಮುಂಭಾಗಕ್ಕೆ  ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ  ಎರಡು ಕಾರುಗಳು  ಹಾನಿಗೊಂಡಿದ್ದು  ಕಾರಿನಲ್ಲಿದ್ದ ನಾಲ್ವರಿಗೆ ಗಾಯವಾಗಿದ್ದು, ಪುತ್ತೂರಿನ ಖಾಸಗಿ  ಆಸ್ಪತ್ರೆಗೆ  ದಾಖಲಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಸ್ಥಳಕ್ಕೆ  ಪುತ್ತೂರು  ಸಂಚಾರ ಠಾಣಾ  ಪೊಲೀಸರು ಆಗಮಿಸಿ ಪರಿಶೀಲನೆ  ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here