ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂದರ್ಭ ಏ.11ರಂದು ನೆಲ್ಲಿಕಟ್ಟೆ ಕೆಎಸ್ಸಾರ್ಟಿಸಿ ಘಟಕದ ದೇವತಾ ಸೇಮಿತಿ ಸೇವಾ ಕಟ್ಟೆಗೆ ದೇವರು ಬರುವ ಸಂದರ್ಭದ ಅಂಗವಾಗಿ ಆ ದಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಮಿತಿ ವತಿಯಿಂದ ಅನ್ನಪ್ರಸಾದ ವಿತರಣೆಗೆ ರೂ. 1ಲಕ್ಷ ದೇಣಿಗೆ ಸಮರ್ಪಣೆ ಮಾಡಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಕೆಎಸ್ಸಾರ್ಟಿಸಿ ಶ್ರೀ ದೇವತಾ ಸಮತಿಯಿಂದ ಕೊಡಲ್ಪಟ್ಟ ದೇಣಿಗೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ.ಐತ್ತಪ್ಪ ನಾಯ್ಕ್, ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ಕೆಎಸ್ಸಾರ್ಟಿಸಿ ಪುತ್ತೂರು ಘಟಕದ ದೇವತಾ ಸಮಿತಿ ಅಧ್ಯಕ್ಷ ಲೋಕೇಶ್ವರ ಪಿ, ಕಾರ್ಯದರ್ಶಿ ಶಾಂತರಾಮ ವಿಟ್ಲ, ಸದಸ್ಯರಾದ ಹರಿಶ್ಚಂದ್ರ ಪಿ ಎಸ್, ಅಶೋಕ್, ಸತೀಶ್ ಕುಮಾರ್, ಸತ್ಯಶಂಕರ್ ಭಟ್, ಸತ್ಯನಾರಾಯಣ ಉಪಸ್ಥಿತರಿದ್ದರು.