ಕೇಪುಳುವಿನಲ್ಲಿ ಕುಸಿಯುವ ಭೀತಿಯಲ್ಲಿರುವ ಬಾವಿಗೆ ನಗರಭೆಯಿಂದ ದುರಸ್ಥಿ ಭಾಗ್ಯ

0

ಪುತ್ತೂರು: ಕೇಪುಳು ಕಾಲೋನಿಯೊಂದರಲ್ಲಿ ಕುಸಿಯುವ ಭೀತಿಯಲ್ಲಿರುವ ಸಾರ್ವಜನಿಕ ಕುಡಿಯುವ ನೀರಿನ ಬಾವಿಯನ್ನು ದುರಸ್ಥಿ ಪಡಿಸುವ ಕುರಿತು ನಗರಸಭೆ ಅಧ್ಯಕ್ಷರು ಮತ್ತು ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ಬಂದಿರುವ ಮಳೆಯಿಂದ ಚರಂಡಿಯಂದ ಹರಿದು ಬಂದ ನೀರಿನ ವೇಗಕ್ಕೆ ಮೊದಲೇ ಕುಸಿಯುವ ಭೀತಿಯಲ್ಲಿದ್ದ ಬಾವಿ ಸ್ವಲ್ಪ ಭಾಗ ಕುಸಿದಿದೆ. ಈ ನಿಟ್ಟಿನಲ್ಲಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಮತ್ತು ನಗರಸಭೆ ಸದಸ್ಯ ಸುಂದರ ಪೂಜಾರಿ ಬಡಾವು ಅವರು ಕಾಲೋನಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಬಾವಿಯ ದುರಸ್ಥಿ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here