ಕಾಣಿಯೂರು: ಚಾರ್ವಾಕ ಗ್ರಾಮದ ಅರುವಗುತ್ತು ಕುಂಬ್ಲಾಡಿ ತರವಾಡು ಮನೆಯಲ್ಲಿ ಎ 8 ಮತ್ತು ಎ 9ರಂದು ಶ್ರೀ ಧರ್ಮದೈವ ರುದ್ರ ಚಾಮುಂಡಿ, ಕುಂಬ್ಲಾಡಿ ಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಿತು. ಎ ೮ರಂದು ಸಂಜೆ ಕಿರುವಾಳು ಭಂಡಾರ ತೆಗೆದು ನೇಮೋತ್ಸವ ಪ್ರಾರಂಭಗೊಂಡು, ರಾತ್ರಿ ಕಲ್ಲುರ್ಟಿ, ಜಾವತೆ,ಕೊರತಿ ದೈವಗಳ ನೇಮೋತ್ಸವ, ಬಳಿಕ ಅನಸಂತರ್ಪಣೆ, ಬಳಿಕ ಪಿಲಿಚಾಮುಂಡಿ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕುಂಬ್ಲಾಡಿ ಚಾಮುಂಡಿ ದೈವದ ನೇಮೋತ್ಸವ ನಡೆಯಿತು. ಎ ೯ರಂದು ಬೆಳಿಗ್ಗೆ ಧರ್ಮದೈವ, ರುದ್ರ ಚಾಮುಂಡಿ ದೈವದ ನೇಮೋತ್ಸವ, ಗುಳಿಗ ದೈವದ ನೇಮೋತ್ಸವ, ಮಧ್ಯಾಹ್ನ ದೈವಗಳ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಅರುವಗುತ್ತು ಕುಂಬ್ಲಾಡಿ ತರವಾಡು ಮನೆಯ ಟ್ರಸ್ಟ್ನ ಗೌರವಾಧ್ಯಕ್ಷರಾದ ಚಂದ್ರಕಲಾ ಜಯರಾಮ್ ಅರುವಗುತ್ತು, ಯಜಮಾನರಾದ ಪ್ರದೀಪ್ ಆರ್ ಗೌಡ, ಅಧ್ಯಕ್ಷರಾದ ಗಣೇಶ್ ಕುಂಬ್ಲಾಡಿ, ಕಾರ್ಯದರ್ಶಿ ಮನೋಹರ್ ಕಟ್ಟತ್ತಾರು, ಉಪಾಧ್ಯಕ್ಷರಾದ ಕುಶಾಲಪ್ಪ ನಡುವಾಲು, ಕೋಶಾಧಿಕಾರಿ ಶಿವರಾಮ ಕುಂಬ್ಲಾಡಿ, ಜತೆ ಕಾರ್ಯದರ್ಶಿ ಸುಮಿತ್ರ ಬಾಕಿಲ ಹಾಗೂ ಕುಟುಂಬಸ್ಥರು, ಟ್ರಸ್ಟ್ನ ಸದಸ್ಯರು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.