ಜಾತ್ರೋತ್ಸವದ ವ್ಯಾಪಾರ ಮೇಳದಲ್ಲಿ ನಂದಿನಿ ಸ್ಟಾಲ್ ಉದ್ಘಾಟನೆ

0

ಪುತ್ತೂರು; ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ನಡೆಯಲಿರುವ ವ್ಯಾಪಾರ ಮೇಳದಲ್ಲಿ ನಂದಿನ ಹಾಲಿನ ಉತ್ಪನ್ನಗಳ ಮಾರಾಟದ ಸ್ಟಾಲ್‌ ಉದ್ಘಾಟನೆಯು ಎ.14ರಂದ ಸಂಜೆ 5.30 ಕ್ಕೆ ನಡೆಯಲಿದೆ.

ದ.ಕ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ ಸ್ಟಾಲ್ ಉದ್ಘಾಟಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್,‌ಶಾಸಕ ಸಂಜೀವ ಮಠಂದೂರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸ್ಟಾಲ್ ನಲ್ಲಿ ನಂದಿನಿ ಹಾಲಿನ ಎಲ್ಲಾ ರೀತಿಯ ಉತ್ಪನ್ನಗಳು ದೊರೆಯಲಿದೆ ಎಂದು ಅಧಿಕೃತ ವಿತರಕ ಕೃಷ್ಣ ಪ್ರಸಾದ್ ಆಳ್ವ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here