![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಸಮಸ್ತ ಕೇರಳ ಇಸ್ಲಾಂ ಮತ ವಿಧ್ಯಾಭ್ಯಾಸ ಪರೀಕ್ಷಾ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಕೂಡುರಸ್ತೆ ರಿಫಾಯಿಯ್ಯ ಮದ್ರಸದ 5 ಮತ್ತು 7ನೇ ತರಗತಿಯಿಂದ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆ ಬರೆದ ೫ನೇ ತರಗತಿಯಲ್ಲಿ ಆಯಿಷಾ ಅಸ್ಫಿಯಾ ಕೂಡುರಸ್ತೆ ಪ್ರಥಮ ಸ್ಥಾನ ಹಾಗೂ ಉನೈಸ್ ಬಾಳಾಯ ದ್ವಿತೀಯ ಸ್ಧಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಮದ್ರಸದ ಅಧ್ಯಾಪಕರಾದ ಇಬ್ರಾಹಿಂ ಫೈಝಿ ಮಾಡನ್ನೂರು ಸಹ ಅಧ್ಯಾಪಕ ಮಹಮ್ಮದ್ ಇಕ್ಬಾಲ್ ಮುಸ್ಲಿಯಾರ್ ಹಾಗೂ ಜಮಾಅತ್ ಆಡಳಿತ ಸಮಿತಿಯವರು ಹಾಗೂ ಪೋಷಕರು ಅಭಿನಂದಿಸಿದ್ದಾರೆ.