![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಾಣಿಯೂರು: ಕರ್ನಾಟಕ ರಾಜ್ಯದ ಪ್ರತಿಷ್ಠಿತ ಐ.ಎಫ್.ಬಿ ಇಂಡಸ್ಟ್ರೀಸ್ ಬೆಂಗಳೂರು ಇವರು ತಮ್ಮ ಕಂಪನಿಯಿಂದ ಚಾರ್ವಾಕ ಸ. ಉ. ಹಿ. ಪ್ರಾ ಶಾಲೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ ಕರಂದ್ಲಾಜೆ ಇವರ ಸಹಕಾರದೊಂದಿಗೆ ಆಧುನಿಕ ತಂತ್ರಜ್ಞಾನದ ಸ್ಮಾರ್ಟ್ ಬೋರ್ಡ್ ಖರೀದಿಸಲು ರೂ. 2 ಲಕ್ಷದ 50 ಸಾವಿರದ ಚೆಕ್ನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಮಣ್ಣ ಗೌಡ ಪೊನ್ನೆತ್ತಡಿ, ಶಾಲಾ ಮುಖ್ಯಗುರು ಪಾರ್ವತಿ, ಎಸ್.ಡಿ.ಎಂ. ಸಿ ನಿಕಟ ಪೂರ್ವ ಅಧ್ಯಕ್ಷ ಗೋಪಾಲಕೃಷ್ಣ ಬಾರೆಂಗಳ ಹಾಗೂ ಎಸ್.ಡಿ.ಎಂ.ಸಿ ಸದಸ್ಯರ ಮುಖಾಂತರ ಹಸ್ತಾಂತರಿಸಿದರು.