ಕಾವು ಅಚಲ ಕಾಂಪ್ಲೆಕ್ಸ್‌ನಲ್ಲಿ ಮೆಡಿಪ್ಲೆಕ್ಸ್ ಲ್ಯಾಬೋರೇಟರಿ ಶುಭಾರಂಭ

0

ಈಶ್ವರಮಂಗಲ: ಕಾವು ಅಚಲ ಕಾಂಪ್ಲೆಕ್ಸ್‌ನಲ್ಲಿ ಮೆಡಿಪ್ಲೆಕ್ಸ್ ಲ್ಯಾಬೋರೇಟರಿ ಮೇ.13ರಂದು ಬೆಳಗ್ಗೆ ಶುಭಾರಂಭಗೊಂಡಿತು. ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಹಾಗೂ ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ರಿಬ್ಬನ್ ಕತ್ತರಿಸಿದರು. ಕಾವು ಬುಶ್ರಾ ವಿದ್ಯಾಸಂಸ್ಥೆಯ ಸಂಚಾಲಕ ಅಬ್ದುಲ್ ಅಜೀಜ್ ಬುಶ್ರಾ, ಕಾವು ಸರಯೂ ಕ್ಲಿನಿಕ್‌ನ ವೈದ್ಯರಾದ ನವೀನ ಶಂಕರ ಎಮ್., ನಾಗಪ್ಪ ಗೌಡ ಬೊಮ್ಮಟ್ಟಿ, ರಾಮಚಂದ್ರ ಭಟ್ ಮಳಿ, ಕೃಷ್ಣಪ್ರಸಾದ್ ಕೊಚ್ಚಿ, ಕೃಷ್ಣಪ್ಪ ಗೌಡ ಪುಳಿತ್ತಡಿ, ಕೇಶವ ಭಟ್, ಕುಸುಮಾವತಿ, ಮನೋಜ್ ನರಿಯೂರು, ಪರಮೇಶ್ವರ ನರಿಯೂರು, ವಿಶ್ವನಾಥ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದು ಶುಭಹಾರೈಸಿದರು. ಮಾಲಕ ಗೌರವ್‌ರವರ ತಾಯಿ ಅತಿಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು.

 

LEAVE A REPLY

Please enter your comment!
Please enter your name here