ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ. 14ರಂದು ಪ್ರತಿಷ್ಠಾ ವಧಂತ್ಯುತ್ಸವ ನಡೆಯಲಿದೆ. ರಾತ್ರಿ ಶ್ರೀ ದೇವರ ಉತ್ಸವ ಹೊರಟು ರಾಜಾಂಗಣದಲ್ಲಿ ಪಲ್ಲಕಿ ಉತ್ಸವ, ಬಂಡಿ ಉತ್ಸವ ನಡೆಯಲಿದೆ. ಉತ್ಸವ ಸಂದರ್ಭ 108 ಕಾಯಿ ಗಣಪತಿ ಹವನ, ಚಂಡಿಕಾ ಹೋಮ, ಶತರುದ್ರಾಭಿಷೇಕ, ಪಲ್ಲಕಿ ಉತ್ಸವ ಸೇವೆ ಮಾಡುವವರು ದೇವಳದ ಸೇವಾ ಕೌಂಟರ್ನಲ್ಲಿ ರಶೀದಿ ಪಡೆಯುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ ಮುಳಿಯ ಮತ್ತು ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಹೆಚ್ ಭಂಡಾರಿ ಅವರು ತಿಳಿಸಿದ್ದಾರೆ.