![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 624ಅಂಕ ಪಡೆದು ರಾಜ್ಯದಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದ ಪವಿತ್ರ ಮತ್ತು ರೂಪೇಶ್ ಶೇಟ್ರವರ ಪುತ್ರಿಯಾಗಿರುವ ಅರ್ಪಿತಾ ಶೇಟ್ರವರಿಗೆ ರೋಟರಿ ಬಾಂಧವ್ಯ ಕುಟುಂಬ ಸಮ್ಮಿಲನದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಿಯೋಜಿತ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ಪುರಂದರ ರೈ ಮಿತ್ರಂಪಾಡಿ, ನಿಕಟಪೂರ್ವ ಅಧ್ಯಕ್ಷ ಕೃಷ್ಣ ನಾರಾಯಣ ಮುಳಿಯ, ನಿಯೋಜಿತ ಅಧ್ಯಕ್ಷ ಶರತ್ ರೈ, ಕಾರ್ಯದರ್ಶಿ ಶಶಿಧರ್ ಕಿಣ್ಣಿಮಜಲು ಉಪಸ್ಥಿತರಿದ್ದರು.