ಪುತ್ತೂರು: ಕಲ್ಲೇಗ ಕಲ್ಕುಡ ದೈವಸ್ಥಾನದಲ್ಲಿ ಮೇ 24ರಂದು ಕಲ್ಲುರ್ಟಿ ದೈವಕ್ಕೆ ಪತ್ತನಾಜೆ ಅಗೇಲು ಸೇವೆ ನಡೆಯಿತು.
ಸಂಜೆ ಕಲ್ಲುರ್ಟಿ ದೈವದ ಸ್ಥಾನದಲ್ಲಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಕಲ್ಲೇಗ, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಕಲ್ಲೇಗ ರೂರಲ್ ಡೆವೆಲಪ್ಮೆಂಟ್ ಟ್ರಸ್ಟ್ನ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ ಮತ್ತು ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ದೈವ ಪಾತ್ರಿ ಜಿನ್ನಪ್ಪ ಗೌಡ ಅವರು ಪ್ರಾರ್ಥನೆ ಮಾಡಿದರು. ಇದೇ ಸಂದರ್ಭದಲ್ಲಿ ದೈವ ನರ್ತಕರು ನುಡಿಗಟ್ಟಿನೊಂದಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೈವಕ್ಕೆ ಅಗೇಲು ಸೇವೆ ನೀಡಲಾಯಿತು.
ಈ ಸಂದರ್ಭದಲ್ಲಿ ಸದಸ್ಯರಾದ ಕಲ್ಲೇಗ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಘವೇಂದ್ರ ಪ್ರಭು ಮಾದವ ಪಟ್ಲ, ಪ್ರಶಾಂತ್ ಎಸ್.ಎನ್, ರವಿಕಿರಣ್, ಮೀನಾಕ್ಷಿ ಡಿ ಗೌಡ, ಸುನಿತಾ, ಪ್ರಸಾದ್ ಬೀಟಿಗೆ, ದೈವ ನರ್ತಕರಾದ ಹೊನ್ನಪ್ಪ, ರೋಹಿತ್, ಸೇರಿದಂತೆ ಸತೀಶ ಶೆಟ್ಟಿ ಕಲ್ಲೇಗ, ಬಿ. ಅಣ್ಣಿ ಪೂಜಾರಿ ಪಟ್ಲ, ಚಂದ್ರಶೇಖರ ಕಲ್ಲೇಗ, ಮೋನಪ್ಪ ಮಡಿವಾಳ, ನವೀನ್ ನಾಕ್, ಸಂತೋಷ್ ಶೆಟ್ಟಿ, ಜಾನಕಿ ಸೇರಿದಂತೆ ಸಾವಿರಕ್ಕೂ ಅಧಿಕ ಭಕ್ತರು ಉಪಸ್ಥಿತರಿದ್ದರು. ಅಗೇಲು ಸೇವೆ ಮಾಡಿಸಿದವರಿಗೆ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಗಂಧ ಪ್ರಸಾದ ವಿತರಣೆ ಮಾಡಿದರು.