ಪುತ್ತೂರು: ದಕ್ಷಿಣ ಕನ್ನಡದಲ್ಲಿಯೇ ಪ್ರಪ್ರಥಮವಾಗಿ ಪೂತ್ತೂರಿನಲ್ಲಿ ಟಾಟ ಕೋಪರ್ ವಾಟರ್ ಮತ್ತು ಜ್ಯೂಸ್ ಲಾಂಚ್ ಕೊಂಬೆಟ್ಟು ಜಿ ಎಲ್ ಟ್ರೇಡ್ ಸೇಂಟರ್ನಲ್ಲಿ ವ್ಯವಹರಿಸುತ್ತಿರುವ ಸುಯೋಗ್ ಟ್ರೇಡರ್ಸ್ನಲ್ಲಿ ಮೇ 26ರಂದು ಉದ್ಘಾಟನೆಗೊಂಡಿತ್ತು.
ಜಿಎಲ್ ಟ್ರೇಡ್ ಸೆಂಟರ್ನ ಮಾಲಕ ಬಲರಾಮ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿ ನೂತನ ವ್ಯವಸ್ಥೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಿವೃತ್ತ ಎಎಸ್ಐ ಬಾಲಕೃಷ್ಣ ರೈ, ಹಾರಾಡಿ ದಾಸ್ ಎಂಟರ್ ಪೈಸಸ್ ಮಾಲಕ ದೇವದಾಸ್, ನಿವೃತ್ತ ಕೃಷಿ ಇಲಾಖೆಯ ಸುಂದರ ರೈ, ಎಡಮಂಗಲ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸೋಮನಾಥ, ಟಾಟ ಮೋಟರ್ಸ್ ಮೆನೇಜರ್ ನಾಗೇಶ್ ಎಂ ಕೆ, ಅಕ್ಸಿಸ್ ಬ್ಯಾಂಕ್ನ ಅರಣ್, ಸುದ್ದಿ ಸೌಹಾರ್ಧ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರೇಂದ್ರ, ಪ್ರಣವ ಸಹಕಾರಿ ಸೌಹಾರ್ದ ಬ್ಯಾಂಕ್ನ ಮೆನೇಜರ್ ರೇಖನಾಥ ರೈ ಉಪಸ್ಥಿತರಿದ್ದರು. ನೂತನ ಸಂಸ್ಥೆಯ ಮಾಲಕ ಶಿವರಾಮ ಸ್ವಾಗತಿಸಿ, ವಂದಿಸಿದರು.
ಟಾಟಾ ಕೋಪರ್ ವಾಟರ್ ಪುತ್ತೂರಿನಲ್ಲಿ ಪ್ರಪ್ರಥಮವಾಗಿ ಲಾಂಚ್ ಮಾಡಿದ್ದೇವೆ 2 ಲಿಟರ್, 1ಲೀ 1/2 ಲೀ 250 ಮಿಲಿ, ಜ್ಯೂಸ್, ಅಲ್ಲದೆ ಬಿಸ್ಕೇಟ್, ಚೋಕಲೆಟ್, ಸೋಡಾ ವಿವಿಧ ಐಟಮ್ ಹೋಲ್ಸೇಲ್ ದರದಲ್ಲಿ ಲಭ್ಯ ವಿದೆ.
ಸುಜಿತ್ ಟಾಟಾ ಕೋಪರ್ ವಾಟರ್ ಸೆಲ್ಸ್ ಆಫಿಸರ್