ಕರ್ಮಲ, ಬೊಳುವಾರಿನಲ್ಲಿ ಬೀದಿ ನಾಯಿ ಕಡಿತ – ನಗರಸಭಾ ಸದಸ್ಯರೊರ್ವರು ಸೇರಿದಂತೆ ಹಲವಾರು ಮಂದಿ ಆಸ್ಪತ್ರೆಗೆ

0

 

ಪುತ್ತೂರು: ಬನ್ನೂರು ಕರ್ಮಲ ಮತ್ತು ಬೊಳುವಾರಿನಲ್ಲಿ ಬೀದಿ ನಾಯಿಯೊಂದು ಕಳೆದ ಎರಡು ದಿನಗಳಿಂದ ಹಲವಾರು ಮಂದಿಗೆ ಕಚ್ಚಿದು, ಮೇ 26 ರಂದು ಬೊಳುವಾರಿನಲ್ಲಿ ನಗರಸಭಾ ಸದಸ್ಯ ಶಿವರಾಮ ಸಪಲ್ಯ ಅವರಿಗೆ ಕಚ್ಚಿದ ಘಟನೆ ನಡೆದಿದೆ.
ಬನ್ನೂರು ಕರ್ಮಲ ಸಮೀಪ ನಾಲ್ಕೈದು ಬೀದಿ ನಾಯಿಗಳಿಗೆ ಕಚ್ಚಿದ ನಾಯಿ ಕಾಲೇಜಿಗೆ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯರಿಗೆ ಸೇರಿ 11 ಮಂದಿಗೆ ಕಚ್ಚಿದೆ. ಮೇ 26 ರಂದು ಬೊಳುವಾರು ಸಮೀಪವೂ ಬೀದಿ ನಾಯಿ ಮೂವರಿಗೆ ಕಚ್ಚಿದೆ. ಇದೇ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ನಗರಸಭಾ ಸದಸ್ಯ ಶಿವರಾಮ ಸಪಲ್ಯ ಅವರಿಗೂ ಕಚ್ಚಿದೆ. ಗಾಯಗಳುಗಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚುಚ್ಚು ಮದ್ದು ಪಡೆದು ಕೊಂಡಿದ್ದಾರೆ.

LEAVE A REPLY

Please enter your comment!
Please enter your name here