ಕಡಬ: ಕುಂತೂರು ಗ್ರಾಮದ ಪದವು ಪೂಚಲಿಲ್ ನಿವಾಸಿ ಜೋಸೆಫ್ ಪಿ.ಎ.ರವರ ಪತ್ನಿ ಸೋಸಮ್ಮ(66ವ.)ರವರು ಅಲ್ಪಕಾಲದ ಅಸೌಖ್ಯದಿಂದ ಮೇ 26ರಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೂರು ದಿನದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ನಿಧನರಾಗಿದ್ದಾರೆ. ಮೃತರು ಪತಿ ಜ್ಯೋತಿ ಡ್ರೈವಿಂಗ್ ಸ್ಕೂಲ್ನ ಮಾಲಕ ಜೋಸೆಫ್ ಪಿ., ಪುತ್ರಿಯರಾದ ಆಶಾ, ಅಲ್ಲಿ ಹಾಗೂ ಆನ್ಸಿಯವರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಮೇ 27ರಂದು ಮಧ್ಯಾಹ್ನ 2 ಗಂಟೆಗೆ ಕುಂತೂರುಪದವು ಸಂತ ಜಾರ್ಜ್ ಅರ್ಥೋಡಾಕ್ಸ್ ಚರ್ಚ್ನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.