ಪುತ್ತೂರು: ಬನ್ನೂರು ಕರ್ಮಲ ನಿವಾಸಿ ಉರಗ ತಜ್ಞ ತೇಜಸ್ ಮತ್ತು ಪುನೀತ್ ಅವರು ಬೆಳ್ತಂಗಡಿ ತಾಲೂಕಿನ ಮುಗೇರಡ್ಕದ ಮನೆಯ ಬಚ್ಚಲು ಕೋಣೆಯಲ್ಲಿದ್ದ 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.
ಮುಗೇರಡ್ಕ ಲೀಲಾವತಿ ಅವರ ಮನೆಯ ಬಚ್ಚಲು ಕೋಣೆಯ ಬಿಸಿನೀರು ಇಡುವಲ್ಲಿ ಕಾಳಿಂಗ ಸರ್ಪವೊಂದು ಸಿಲುಕಿರುವುದುನ್ನು ಮಾಹಿತಿ ಪಡೆದ ತೇಜಸ್ ಮತ್ತು ಪುನೀತ್ ಅವರು ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಅದನ್ನು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.