ಪುತ್ತೂರು: ಕ್ಯಾಂಪ್ಕೋ ಸಂಸ್ಥೆ ಮಂಗಳೂರು ಇದರ ವತಿಯಿಂದ “ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ’ ಎಂಬ ಯೋಜನೆಯಡಿಯಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮವು ಮೇ 29ರಂದು ಕ್ಯಾಂಪ್ಕೋ ತುಮಕೂರು ಶಾಖೆಯಲ್ಲಿ ನಡೆಯಿತು.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಪಾತಗನಹಳ್ಳಿ ಗ್ರಾಮದ ಮನೆಯಲ್ಲಿ ಕ್ಯಾಂಪ್ಕೋ ಸಕ್ರೀಯ ಸದಸ್ಯ ಮಲ್ಲೆ ಗೌಡ ಇವರ ಅಂಜಿಯೋಪ್ಲಾಸ್ಟಿ ಚಿಕಿತ್ಸೆಗಾಗಿ ಕ್ಯಾಂಪ್ಕೋ ವತಿಯಿಂದ ನೀಡಲಾದ ರೂ. 50ಸಾವಿರ ಚೆಕ್ ಅನ್ನು ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲರವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ತುಮಕೂರು ಪ್ರಾದೇಶಿಕ ವ್ಯವಸ್ಥಾಪಕ ತುಕಾರಾಂ, ಶಾಖಾಧಿಕಾರಿ ಕೃಪೇಶ್ ರೈ ಎನ್ ಹಾಗೂ ಸಿಬ್ಬಂದಿಗಳಾದ ಚಂದ್ರಶೇಖರ್, ರವಿಕಿರಣ್ ಟಿ.ಜಿ, ಹೇರಂಬ ಈಶ್ವರ್ ನಾಯ್ಕ್, ಸತೀಶ್ ಉಪಸ್ಥಿತರಿದ್ದರು.