ಪುತ್ತೂರು: ಶಿವಳ್ಳಿ ಸಂಪದದ ಪುತ್ತೂರು ದರ್ಬೆ ವಲಯದ ಮಹಾಸಭೆ ಕೆಮ್ಮಿಂಜೆ ಶ್ರೀ ಷಣ್ಮುಖ ಮಹಾವಿಷ್ಣು ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ವಲಯಾಧ್ಯಕ್ಷರಾಗಿ ರಂಗ ಕಲಾವಿದೆ ವಸಂತಲಕ್ಷ್ಮಿರವರನ್ನು ಆಯ್ಕೆ ಮಾಡಲಾಯಿತು.
ನರಸಿಂಹ ಶಗ್ರಿತ್ತಾಯರವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ತಾಲೂಕು ಘಟಕದ ಅಧ್ಯಕ್ಷ ದಿವಾಕರ ನಿಡ್ವಣ್ಣಾಯ ಉಪಸ್ಥಿತರಿದ್ದರು. ಸತ್ಯನಾರಾಯಣ ಪೂಜೆಯೊಂದಿಗೆ ಆರಂಭವಾದ ಸಭೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಲಕ್ಷ್ಮಿ ನಾರಾಯಣ ಕಡಂಬಳಿತ್ತಾಯರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅನನ್ಯ, ಸಂಜನಾ ಸತೀಶ್ ಕಲ್ಲುರಾಯ, ನಿಖಿತಾ ಕೆ ಮತ್ತು ಡಾ. ಶರಣ್ಯ ಶಗ್ರಿತ್ತಾಯರವರನ್ನು ಸನ್ಮಾನಿಸಲಾಯಿತು. ತಾಲೂಕು ಕಾರ್ಯದರ್ಶಿ ಸತೀಶ ಕೆದಿಲಾಯ, ಕೋಶಾಧಿಕಾರಿ ರಂಗನಾಥ ಉಂಗ್ರುಪುಳಿತ್ತಾಯ, ನಿಕಟಪೂರ್ವ ಅಧ್ಯಕ್ಷ ಹರೀಶ್ ಪುತ್ತೂರಾಯ, ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ, ವಲಯ ಕಾರ್ಯದರ್ಶಿ ಗುರುರಾಜ ಕೊಳತ್ತಾಯ, ಕೋಶಾಧಿಕಾರಿ ರಾಮ್ ಮೋಹನ್ ಆಚಾರ್, ತಾಲೂಕು ಪ್ರತಿನಿಧಿ ಪ್ರಶಾಂತ್ ಆಚಾರ್, ಮಹಿಳಾ ಸಂಪದದ ಅಧ್ಯಕ್ಷೆ ವೀಣಾ ನಾಗೇಶ ತಂತ್ರಿ, ಕಾರ್ಯದರ್ಶಿ ರಮಾದೇವಿ ಆಚಾರ್, ತಾಲೂಕು ಮಹಿಳಾ ಸಂಪದದ ಗೌರವಾಧ್ಯಕ್ಷೆ ವತ್ಸಲಾ ರಾಜ್ಞಿ, ಜಯಲಕ್ಷ್ಮಿ ದಾಳಿಂಬ ಸಹಿತ ಹಲವರು ಭಾಗವಹಿಸಿದ್ದರು. ಮಹಾಸಭೆಯ ಬಳಿಕ ವಲಯದ ಕಲಾ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಸಂತಲಕ್ಷ್ಮಿಯವರು ಮುಕ್ರಂಪಾಡಿ ನಿವಾಸಿಯಾಗಿರುವ ವಕೀಲ ಶಶಿಧರ ಬಿ.ಯನ್.ರವರ ಪತ್ನಿಯಾಗಿದ್ದು ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ವಲಯದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ ವಸಂತಲಕ್ಷ್ಮಿರವರದ್ದಾಗಿದೆ.