ಪುತ್ತೂರು : ಆನಡ್ಕದ ಪಂಜಿಗ, ಪರನೀರು, ಬಿರ್ಮಣಕಜೆ ಹಾಗೂ ಮಲೆಪಡ್ಪು ಪರಿಸರದಲ್ಲಿ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ಮರದ ಗೆಲ್ಲುಗಳನ್ನು ತೆರವುಗೊಳಿಸಲಾಯಿತು. ಮೆಸ್ಕಾಂನ ಪವರ್ ಮ್ಯಾನ್ ಚಂದ್ರಶೇಖರರವರ ನೇತೃತ್ವದಲ್ಲಿ ಸ್ಥಳಿಯರಾದ ಹೊನ್ನಪ್ಪ ಗೌಡ ಮಜಲು, ವಿಶ್ವನಾಥ ಗೌಡ ಮಜಲು, ತಿಲಕ್, ನರಿಮೊಗರು ಗ್ರಾ.ಪಂ.ಸದಸ್ಯ ದಿನೇಶ್ ಗೌಡ ಮಜಲು, ಮಜಲು ತರವಾಡು ಮನೆಯ ವಿಶ್ವನಾಥ ಗೌಡ, ಪ್ರಶಾಂತ್ ವಾಲ್ತಾಜೆ, ಹರೀಶ್ ಬಿರ್ಮನಕಜೆ, ವೆಂಕಟ್ರಮಣ ಗೌಡ ಬೊಳ್ಳಮೆ, ಸುರೇಶ್ ನಾಯ್ಕ ಬಿರ್ಮಣಕಜೆ, ಸುಭಾಶ್ಚಂದ್ರ ನಾಯಕ್ ಮಜಲು, ಹರಿಕೃಷ್ಣ ನಾಯಕ್, ನಿಶ್ಮಿತ್ ಭಾಗವಹಿಸಿದರು.