ಗ್ರಾಮ ಪಂಚಾಯತ್ ಪಿಡಿಒಗಳ ವರ್ಗಾವಣೆ :ಬಲ್ನಾಡಿನ ಶರೀಫ್‌  ಕೊಡಿಪ್ಪಾಡಿಗೆ, ಕೊಯಿಲದ ನಮಿತ ಕೆಯ್ಯೂರಿಗೆ

0

ಪುತ್ತೂರು:2022-23ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾ.ಪಂಗಳ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಗ್ರೇಡ್-1, ಹಾಗೂ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಯ ಮಾರ್ಗಸೂಚಿಗಳ ಅನುಸಾರ ನಿಗದಿಪಡಿಸಿರುವ ಕನಿಷ್ಠ ಸೇವಾ ಅವಧಿಯನ್ನು ಪೂರೈಸಿರುವ ನೌಕರರನ್ನು ಆಡಳಿತಾತ್ಮಕ ಹಿತದೃಷ್ಠಿಯಿಂದ ವರ್ಗಾವಣೆ ಮಾಡಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶಿಸಿದ್ದಾರೆ.

ಬಲ್ನಾಡು ಗ್ರಾ.ಪಂನ ಪಿಡಿಓ ಶರೀಫ್ ಎ.ರವರು ಕುಡಿಪ್ಪಾಡಿ ಗ್ರಾ.ಪಂಗೆ ವರ್ಗಾವಣೆಗೊಂಡಿದ್ದಾರೆ. ಕಡಬದ ಕೊಯಿಲ ಗ್ರಾ.ಪಂನ ಪಿಡಿಓ ನಮಿತಾ ಎ.ಕೆರವರನ್ನು ಕೆಯ್ಯೂರು ಗ್ರಾ.ಪಂಗೆ ನಿಯುಕ್ತಿಗೊಳಿಸಲಾಗಿದೆ. ವರ್ಗಾವಣೆಗೊಂಡಿರುವ ಅಭಿವೃದ್ಧಿ ಅಧಿಕಾರಿಗಳು ತಕ್ಷಣ ನಿಯುಕ್ತಿಗೊಂಡ ಗ್ರಾ.ಪಂಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶದಲ್ಲಿ ಸೂಚಿಸಿದ್ದಾರೆ. ಪಿಡಿಓ ಶರೀಫ್‌ ರವರು ಸುಮಾರು ಒಂದು ವರ್ಷದಿಂದ ಕುಡಿಪ್ಪಾಡಿ ಗ್ರಾ.ಪಂನಲ್ಲಿ ಪ್ರಭಾರ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

LEAVE A REPLY

Please enter your comment!
Please enter your name here