ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಅಂಚೆ ಕಚೇರಿ ಪುತ್ತೂರು ಇವರ ಸಹಯೋಗದಲ್ಲಿ ಆಧಾರ್ ಕಾರ್ಡ್ಗೆ ಮೊಬೈಲ್ ನಂಬರ್ ಜೋಡಣೆ ಕಾರ್ಯಕ್ರಮ ಜೂ.18ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ ಅವರು ಉದ್ಘಾಟಿಸಿದರು. ಪುತ್ತೂರು ಅಂಚೆ ಕಚೇರಿಯ ಸಿಬ್ಬಂದಿಗಳು ಆಧಾರ್ಗೆ ಮೊಬೈಲ್ ನಂಬರ್ ಜೋಡಣೆ ನಡೆಸಿಕೊಟ್ಟರು. ನೆಲ್ಯಡಿ ಅಸುಪಾಸಿನ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಯಾಕರ ರೈ ವಂದಿಸಿದರು. ಸಂಘದ ಮೇನೇಜರ್ ರಮೇಶ್, ಸಿಬ್ಬಂದಿಗಳಾದ ಮಹೇಶ್ ಎಂ.ಟಿ., ಸಂದೀಪ್ ಶೆಟ್ಟಿ, ರೋಶನ್ ಕುಮಾರ್, ಮುಕುಂದ ಪ್ರಸಾದ್, ನಾಗೇಶ್, ಪ್ರಮೋದ್ರವರು ಸಹಕರಿಸಿದರು.