ಪುತ್ತೂರು: ಶಾಸಕರ ರೂ.10 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ರೆಂಜಲಾಡಿ-ಕಡ್ಯ ಕಾಂಕ್ರೀಟ್ ರಸ್ತೆಯ ಕಾಮಗಾರಿ ಪೂರ್ಣಗೊಂಡಿದ್ದು ಅದರ ಉದ್ಘಾಟನೆಯನ್ನು ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ನೆರವೇರಿಸಿದರು.
ಮುಂಡೂರು ಗ್ರಾ.ಪಂ ಸದಸ್ಯರಾದ ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ರಸಿಕ ರೈ ಮೆಗಿನಗುತ್ತು, ಕರುಣಾಕರ ಗೌಡ ಎಲಿಯ, ಕಾವ್ಯ ತೌಡಿಂಜ, ಮಾಜಿ ಸದಸ್ಯರಾದ ಬಾಲಚಂದ್ರ ಕಡ್ಯ, ಶಿವನಾಥ ರೈ ಮೇಗಿನಗುತ್ತು, ಬಿಜೆಪಿ ಸರ್ವೆ ಶಕ್ತಿ ಕೇಂದ್ರದ ಅಧ್ಯಕ್ಷ ಅಶೋಕ್ ರೈ ಸೊರಕೆ, ಬೂತ್ ಅಧ್ಯಕ್ಷ ಪದ್ಮಯ್ಯ ಗೌಡ ಕಡ್ಯ ಹಾಗೂ ಹೇಮರಾಜ್ ಆಚಾರ್ಯ, ಹರೀಶ್ ಗೌಡ ಕಡ್ಯ, ಶರತ್ ಗೌಡ ಕಡ್ಯ, ಮೋನಪ್ಪ ಗೌಡ,ಸತ್ಯನಾರಾಯಣ ಎಸ್ಡಿ, ಸವಿತಾ ಪಿ.ಕೆ, ಪುಷ್ಪಾ, ಸುಶೀಲ ಪಾಲ್ಗೊಂಡಿದ್ದರು.