ಪುತ್ತೂರು:ಮುಂಡೂರು ಗ್ರಾಮದ ಮುಹ್ಯುದ್ದೀನ್ ಜುಮ್ಮಾ ಮಸೀದಿ ಇದರ ಆಡಳಿತ ಸಮಿತಿ ಕುವ್ವತ್ತುಲ್ ಇಸ್ಲಾಂ ಜಮಾಹತ್ ಕಮಿಟಿಯ ಮಹಾಸಭೆ ಮತ್ತು ಮೌಲೀದ್ ನೇರ್ಚೆಯು ಇತ್ತೀಚೆಗೆ ನಡೆಯಿತು.
ಜಮಾಹತ್ ಗೌರವಾಧ್ಯಕ್ಷ ಮುಹಮ್ಮದ್ ಹಾಜಿ ಶೇಖಮಲೆಯವರು ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ರಝಾಕ್ ಮುಸ್ಲಿಯಾರ್ ದುಆ ನೆರವೇರಿಸಿದರು. ಕಾರ್ಯದರ್ಶಿ ಹನೀಫ್ ID ವರದಿ ಮಂಡಿಸಿದರು. ಅಧ್ಯಕ್ಷ ಇಬ್ರಾಹಿಂ ಪಾಪೆತ್ತಡ್ಕ, ಉಪಾಧ್ಯಕ್ಷ ಉಸ್ಮಾನ್ ನೆಕ್ಕಿಲ್, ಮಾಜಿ ಅಧ್ಯಕ್ಷರುಗಳಾದ ಅಬ್ಬಾಸ್ ಪಾಪೆತ್ತಡ್ಕ , ಸುಲೈಮಾನ್ ಪರಮಾರ್ಗ ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಇಸ್ಮಾಯಿಲ್ ಹಾಜಿ ಕೊಂಬಾಳಿ, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಜೆ ಪಾಪೆತ್ತಡ್ಕ , ಪ್ರದಾನ ಕಾರ್ಯದರ್ಶಿ ಉಮ್ಮರ್ ಶಾಫಿ ಪಾಪೆತಡ್ಕ, ಕಾರ್ಯದರ್ಶಿಯಾಗಿ ಅಶ್ರಫ್ ಆನಾಜೆ, ಕೋಶಾಧಿಕಾರಿಯಾಗಿ ಮಹಮ್ಮದ್ ಹಾಜಿ ದರ್ಕಾಸ್ , ಲೆಕ್ಕಪರಿಶೋಧಕರಾಗಿ ಹನೀಫ್ ID ನರಿಮೊಗರು ಹಾಗೂ ಕಾರ್ಯಾಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ರಝಾಕ್ ಮುಸ್ಲಿಯಾರ್ ಕಾಳಿಂಗಹಿತ್ಲು, ಸುಲೈಮಾನ್ ಪರಮಾರ್ಗ, ಇಬ್ರಾಹಿಂ ಬೊಳ್ಳಮೆ, ಉಸ್ಮಾನ್ ನೆಕ್ಕಿಲ್, ಉಮ್ಮರ್ ಕೆ.ಎ., ರಮ್ಲಕುಂಞ್ಞಿ ನಾಡಾಜೆ, ಕುಂಞ್ಞಿ ಅಹ್ಮದ್ ನಾಡಾಜೆ, ಪುತ್ತು ಕೊಂಬಾಳಿ, ಮಹಮ್ಮದ್ ಕುಂಞ್ಞಿ ಪಾಪೆತ್ತಡ್ಕ, ಉಸ್ಮಾನ್ ಪಾಪೆತ್ತಡ್ಕ, ಹಸೈನಾರ್ ಪರಮಾರ್ಗ, ಯೂಸುಫ್ ನೆಕ್ಕಿಲ್, ಮಹಮೂದ್ ನೆಕ್ಕಿಲ್ ರನ್ನು ಆಯ್ಕೆ ಮಾಡಲಾಯಿತು.
ಬಳಿಕ ಜಮಾಹತ್ ಉಸ್ತಾದರಾದ ಯೂಸುಫ್ ಫೈಝಿಯರ ನೇತೃತ್ವದಲ್ಲಿ ಮೌಲೂದ್ ನೇರ್ಚೆ ನಡೆಯಿತು. ಮುಹಲ್ಲಿಂ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಉಪಸ್ಥಿತರಿದ್ದರು.