ಪುತ್ತೂರು: ಹಾರಾಡಿಯಲ್ಲಿರುವ ಮೂಕಾಂಬಿಕಾ ಗ್ಯಾಸ್ ಏಜೆನ್ಸಿಯಲ್ಲಿ ಗುತ್ತಿಗೆ ಆಧಾರದಲ್ಲಿ ಗ್ಯಾಸ್ ಸಿಲಿಂಡರ್ ಡೆಲಿವರಿ ಮತ್ತು ಚಾಲಕ ಕೆಲಸ ನಿರ್ವಹಿಸುತ್ತಿದ್ದ ಆನೆಮಜಲು ನಿವಾಸಿ ಪ್ರಶಾಂತ್ ಕುಮಾರ್ (41ವ)ರವರು ನಾಪತ್ತೆಯಾದ ಕುರಿತು ದೂರು ದಾಖಲಾಗಿತ್ತು. ಇದೀಗ ಅವರು ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ.
ಪ್ರಶಾಂತ್ ಕುಮಾರ್ ಅವರು ಹಾರಾಡಿ ಮೂಕಾಂಬಿಕಾ ಗ್ಯಾಸ್ ಏಜೆನ್ಸಿಯಲ್ಲಿ ಸುಮಾರು 6ವರ್ಷಗಳಿಂದ ಗುತ್ತಿಗೆ ಆಧಾರರದಲ್ಲಿ ಗ್ಯಾಸ್ ಸಿಲಿಂಡರ್ ಡೆಲಿವರಿ ಮತ್ತು ಚಾಲಕ ಕೆಲಸ ನಿರ್ವಹಿಸುತ್ತಿದ್ದರು. ಜೂ. 26ರಂದು ಕೆಲಸಕ್ಕೆ ರಜೆ ಇದ್ದರಿಂದ ಮನೆಯಲ್ಲಿದ್ದ ಅವರು ಬಳಿಕ ಅವರು ನಾಪತ್ತೆಯಾಗಿದ್ದರು. ಈ ಕುರಿತು ಅವರ ಪತ್ನಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಜೂ. 28ರಂದು ದೂರು ನೀಡಿದ್ದರು. ಆದರೆ ನಾಪತ್ತೆಯಾಗಿದ್ದ ಪ್ರಶಾಂತ್ ಅವರು ಜೂ. 29ರಂದು ಠಾಣೆಗೆ ಹಾಜರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.