ಕುಂಬ್ರ ಅರ್ಚನಾ ಸಂಕೀರ್ಣದಲ್ಲಿ ಹೊಟೇಲ್ ಶ್ರೀ ದುರ್ಗಾ ಶುಭಾರಂಭ

0

ಪುತ್ತೂರು: ಕುಂಬ್ರ-ಬೆಳ್ಳಾರೆ ರಸ್ತೆಯಲ್ಲಿ ಕುಂಬ್ರದಿಂದ 200 ಮೀಟರ್ ದೂರದಲ್ಲಿರುವ ಅರ್ಚನಾ ಸಂಕೀರ್ಣದಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳನ್ನೊಳಗೊಂಡ ಹೊಟೇಲ್ ಶ್ರೀ ದುರ್ಗಾ ಜು.15 ರಂದು ಶುಭಾರಂಭಗೊಂಡಿತು. ಸುರೇಶ್ ಉಡುಪರವರ ಗಣಪತಿ ಹೋಮ ಇತ್ಯಾದಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹೊಟೇಲ್ ಆರಂಭಗೊಂಡಿತು. ಅರ್ಚನಾ ಸಂಕೀರ್ಣದ ಮಾಲಕ ಬಾಬು ಪೂಜಾರಿ ಬಡಕ್ಕೋಡಿಯವರು ದೀಪ ಬೆಳಗಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ನಟ, ನಿರ್ದೇಶಕ ಸುಂದರ್ ರೈ ಮಂದಾರ, ಕೆಯ್ಯೂರು ಗ್ರಾಪಂ ಸದಸ್ಯ ಶರತ್ ಕುಮಾರ್ ಮಾಡಾವು, ವರ್ತಕರ ಸಂಘದ ಪದಾಧಿಕಾರಿಗಳಾದ ಮೆಲ್ವಿನ್ ಮೊಂತೆರೋ, ಉದಯ ಆಚಾರ್ಯ ಕೃಷ್ಣನಗರ, ಪದ್ಮನಾಭ ಆಚಾರ್ಯ, ದಿವಾಕರ ಶೆಟ್ಟಿ, ಉದಯ ರೈ, ಮಹಮ್ಮದ್ ಪಿ.ಕೆ, ಜಗದೀಶ್ ರೈ ಅಲಂಗೂರು, ಸಾನ್ವಿ ಜನರಲ್ ಸ್ಟೋರ್‌ನ ದಿನೇಶ್ ಎರ್ಕ ಸಹಿತ ನೂರಾರು ಮಂದಿ ಆಗಮಿಸಿ ಶುಭಹಾರೈಸಿದರು. ಶ್ರೀ ದುರ್ಗಾ ಹೊಟೇಲ್ ಮಾಲಕ ಸಚಿನ್ ಪೂಜಾರಿಯವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿ ಸಹಕಾರ ಕೋರಿದರು.

ಬಾಳೆಎಲೆ ಊಟ, ಕ್ಯಾಟರಿಂಗ್ ವ್ಯವಸ್ಥೆ
ಹೊಟೇಲ್ ಶ್ರೀ ದುರ್ಗಾದಲ್ಲಿ ವಿಶೇಷವಾಗಿ ತುಳುನಾಡಿನ ಬಾಳೆ ಎಲೆ ಊಟ ದೊರೆಯಲಿದೆ. ಇದಲ್ಲದೆ ಚಹಾ, ಕಾಫಿ, ತಿಂಡಿ ತಿನಿಸುಗಳು ಲಭ್ಯವಿದೆ. ಎಲ್ಲಾ ಸಭೆ ಸಮಾರಂಭಗಳಿಗೆ ಬೇಕಾದ ಸಸ್ಯಹಾರಿ ಮತ್ತು ಮಾಂಸಹಾರಿ ಕ್ಯಾಟರಿಂಗ್ ವ್ಯವಸ್ಥೆ ಇದೆ. ಹೆಚ್ಚಿನ ಮಾಹಿತಿಗೆ ಮೊ.6361834162 ಅಥವಾ 9483708109 ಗೆ ಸಂಪರ್ಕಿಸಬಹುದಾಗಿದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here