ಪುತ್ತೂರು: ಅಡುಗೆಗೆಂದು ತಂದ ಬೆಲ್ಲದೊಳಗೆ ಬ್ಯಾಟರಿ ಪತ್ತೆಯಾದ ಘಟನೆ ಪೆರ್ನಾಜೆಯಲ್ಲಿ ಜು.೨೩ರಂದು ನಡೆದಿದೆ. ಪೆರ್ನಾಜೆ ನಿವಾಸಿ ರಾಮಕೃಷ್ಣ ಉಂಗ್ರುಪುಳಿತ್ತಾಯ ಎಂಬವರು ತನ್ನ ಮನೆಯಲ್ಲಿ ದೇವರ ಕೋಣೆಯಲ್ಲಿ ಎಂದಿನಂತೆ ಪೂಜೆಗೆ ಇಟ್ಟ ಬೆಲ್ಲವನ್ನು ಬಳಿಕ ಹುಡಿ ಮಾಡಿ ಅಡುಗೆಗೆಂದು ಬಳಸುವ ವೇಳೆ ಬೆಲ್ಲದೊಳಗೆ ಬ್ಯಾಟರಿ ಇರುವುದು ಪತ್ತೆಯಾಗಿದೆ.