ಪುತ್ತೂರು: ಪುತ್ತೂರಿನ ಸೈಂಟ್ ವಿಕ್ಟರ್ಸ್ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯ ಕುಮಿತೆ ವಿಭಾಗದಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ 7ನೆ ತರಗತಿಯ ವಿಘ್ನೇಶ್ ಬಿ. ಶೆಟ್ಟಿ ಮತ್ತು ಮೊಹಮ್ಮದ್ ಅವದ್ ಶಾ ಅನುಕ್ರಮವಾಗಿ 2ನೆ ಮತ್ತು 3ನೆ ಬಹುಮಾನಗಳನ್ನು ಪಡೆದುಕೊಂಡರು. ತರಬೇತಿದಾರರಾಗಿ ದಿನೇಶ್ ಮತ್ತು ಸಂಯೋಜಕರಾಗಿ ಧನಂಜಯ ಮರ್ಕಂಜ ಸಹಕರಿಸಿದ್ದರು ಎಂದು ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ, ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಹಾಗೂ ಪ್ರಾಂಶುಪಾಲ ಸೀತಾರಾಮ ಕೇವಳರವರು ತಿಳಿಸಿದ್ದಾರೆ.