ಪ್ರವೀಣ್ ಹತ್ಯೆ ಹಿನ್ನೆಲೆ: ಸವಣೂರಿನಲ್ಲಿ ಬಿಗು ಪೊಲೀಸ್ ತಪಾಸಣೆ

0

ಪುತ್ತೂರು: ಪ್ರವೀಣ್ ನೆಟ್ಟಾರು ಅವರು ಹಂತಕರಿಂದ ಹತ್ಯೆಗೀಡಾದ ಬಳಿಕ ಜುಲೈ 28ರಂದು ಸವಣೂರು ಪೇಟೆಯಲ್ಲಿ ವಾಹನಗಳ ಬಿಗು ತಪಾಸಣೆ ನಡೆಸಲಾಗುತ್ತಿದೆ. ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರ ಹತ್ಯೆಯಾದ ಬಳಿಕ ಪುತ್ತೂರು, ಸುಳ್ಯ, ಕಡಬ ತಾಲೂಕಿನಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಪೊಲೀಸರಿಗೆ ಕೆಎಸ್‌ಆರ್‌ಪಿ ಕೂಡ ಸಾಥ್ ನೀಡಿದೆ. ಸವಣೂರಿನಲ್ಲಿ ಈ ಮೊದಲೇ ಬ್ಯಾರಿಕೇಡ್ ಹಾಕಲಾಗಿತ್ತು. ಇದೀಗ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ಬಳಿಕ ಸವಣೂರಿನಲ್ಲಿ ಪೊಲೀಸರು ತಪಾಸಣೆಯನ್ನು ಬಿಗುಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here