ಕೌಡಿಚ್ಚಾರು : ವಿವೇಕಾನಂದ ಯುವಕ ವೃಂದದಿಂದ ಕಾರ್ಗಿಲ್ ವಿಜಯ ದಿವಸ್ ಆಚರಣೆ

0

 

ಪುತ್ತೂರು: ವಿವೇಕಾನಂದ ಯುವಕ ವೃಂದ (ರಿ.) ಕೌಡಿಚ್ಚಾರು ಅರಿಯಡ್ಕ ಇದರ ವತಿಯಿಂದ ಶ್ರೀ ಕೃಷ್ಣ ಭಜನಾ ಮಂದಿರದ ವಠಾರದಲ್ಲಿ ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಯಿತು, ಕಾರ್ಯಕ್ರಮವನ್ನು ಯುವಕ ವೃಂದದ ಗೌರವ ಸಲಹೆಗಾರರಾದ ಕೃಷ್ಣ ಕುಲಾಲ್ ಕೌಡಿಚ್ಚಾರು ರವರು ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿ ಹಿತ ನುಡಿದರು, ಯುವಕ ವೃಂದದ ಎಲ್ಲಾ ಸದಸ್ಯರು ಪುಷ್ಪಾರ್ಚನೆ ಮಾಡಿ ವಂದಿಸಿದರು. ನಂತರ ಯುವಕ ವೃಂದದ ಅಧ್ಯಕ್ಷರಾದ ದುರ್ಗಾಪ್ರಸಾದ್ ಕುತ್ಯಾಡಿ ಹಾಗೂ ಗೌರವ ಸಲಹೆಗಾರರಾದ ಕೃಷ್ಣ ಕುಲಾಲ್ ಕೌಡಿಚ್ಚಾರು ರವರು ದೇಶಭಕ್ತಿಗೀತೆ ಹಾಡಿದರು, ನಂತರ ಎಲ್ಲಾ ಸದಸ್ಯರು ಒಟ್ಟು ಸೇರಿ ಪ್ರಾಣತ್ಯಾಗಗೈದ ವೀರಯೋಧರಿಗೆ ನುಡಿನಮನ ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ, ಗೌರವ ಸಲಹೆಗಾರದ ಬಾಲಕೃಷ್ಣ ಕುಲಾಲ್ ಕೌಡಿಚ್ಚಾರು, ಸಾಂಸ್ಕೃತಿಕ ಜತೆ ಕಾರ್ಯದರ್ಶಿ ಉದಯ ರಾಜ್ ಆಕಾಯಿ, ಸದಸ್ಯರಾದ ಮುಕುಂದ ನಾಯ್ಕ ದೇವುಮೂಲೆ, ದುರ್ಗಾಪ್ರಸಾದ್ ನಾಯ್ಕ ಮುಂಗ್ಲಿಮೂಲೆ,ಹರೀಶ್ ಕೆ ಕುತ್ಯಾಡಿ ಸಹಕರಿಸಿದರು, ಈ ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷರಾದ ವಸಂತ ಕುಲಾಲ್ ಆಕಾಯಿ ಸ್ವಾಗತಿಸಿ, ಸದಸ್ಯರಾದ ಪ್ರೀತೇಶ್ ಆಚಾರ್ಯ ರವರು ವಂದಿಸಿ, ಪ್ರಧಾನ ಕಾರ್ಯದರ್ಶಿ ದೀಪಕ್ ಕುಲಾಲ್ ನಿರೂಪಿಸಿದರು.

LEAVE A REPLY

Please enter your comment!
Please enter your name here