ಪುತ್ತೂರು ಸ್ಕಿನ್ ಕ್ಲಿನಿಕ್, ಲೇಸರ್ ಸೆಂಟರ್‌ನಲ್ಲಿ ಅತ್ಯಾಧುನಿಕ ಲೇಸರ್ ಯಂತ್ರಗಳ ಅನಾವರಣ

0

ಪುತ್ತೂರು: ಚರ್ಮ ರೋಗಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಚಿಕಿತ್ಸೆಗಾಗಿ ಇನ್ನು ದೂರ ಮಂಗಳೂರು, ಬೆಂಗಲೂರಿಗೋ ತೆರಳಬೇಕಾಗಿಲ್ಲ. ಡರ್ಮಟಾಲಜಿ, ಕಾಸ್ಮೆಟೋಲಜಿ ಹಾಗೂ ಲೇಸರ್ ಚಿಕಿತ್ಸೆಯಲ್ಲಿ ಖ್ಯಾತಿ ಹೊಂದಿರುವ ಬೊಳುವಾರು ಅಲ್ಮಾಸ್ ಟವರ್‍ಸ್‌ನಲ್ಲಿರುವ ಡಾ.ಸಚಿನ್ ಶೆಟ್ಟಿಯವರ ಪುತ್ತೂರು ಸ್ಕಿನ್ ಕ್ಲಿನಿಕ್, ಲೇಸರ್ ಸೆಂಟರ್‌ನಲ್ಲಿ ಚರ್ಮ ರೋಗಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕ ಮಾದರಿಯ ತಂತ್ರಜ್ಞಾನಗಳನ್ನು ಒಳಗೊಂಡಿರುವ ಅಲ್ಟ್ರಾ ಶಾರ್ಟ್ ಪಲ್ಸ್ ಟ್ರಿಪಲ್ ವೇವ್‌ಲೆಂಥ್ ಡಿಯೋಡ್ ಲೇಸರ್ ಸಿಸ್ಟಮ್ ಹಾಗೂ308ಎನ್‌ಎಂ ಎಕ್ಸೈಮರ್ ಲೇಸರ್ ಸಿಸ್ಟಮ್‌ನ್ನು ಅಳವಡಿಸಲಾಗಿದ್ದು ಇದರ ಉದ್ಘಾಟನೆಯು ಜು.31ರಂದು ನಡೆಯಿತು.


ಡಾ.ಸಚಿನ್ ಶೆಟ್ಟಿಯವರ ತಂದೆ ಭಾರತೀಯ ಜೀವ ವಿಮಾ ನಿಗಮ ನಿವೃತ್ತ ಅಭಿವೃದ್ಧಿ ಅಧಿಕಾರಿ ಸದಾನಂದ ಶೆಟ್ಟಿ ತಾಯಿ ಶಕೀಲಾ ಸದಾನಂದ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ಡಾ.ಸಚಿನ್ ಶೆಟ್ಟಿಯವರ ಪತ್ನಿ ಡಾ ವೈಶಾಖಾ, ಡಾ.ಸುರೇಶ್ ಶೆಟ್ಟಿ, ಮಲ್ಲಿಕಾ, ಹರಿಪ್ರಸಾದ್ ಹೊಟೇಲ್ ಮ್ಹಾಲಕ ಹರಿನಾರಾಯಣ ಹೊಳ್ಳ, ಚೇತನಾ ಆಸ್ಪತ್ರೆಯ ಡಾ.ಜೆ.ಸಿ. ಅಡಿಗ, ಆದರ್ಶ ಆಸ್ಪತ್ರೆಯ ಡಾ.ಎಂ.ಕೆ ಪ್ರಸಾದ್, ಮಹಾವೀರ ಆಸ್ಪತ್ರೆಯ ಡಾ.ಅಶೋಕ್ ಪಡಿವಾಳ್, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಗೋಪಿನಾಥ ಶೆಟ್ಟಿ, ನರ ಮಾನಸಿಕ ತಜ್ಞ ಡಾ.ಗಣೇಶ್ ಪ್ರಸಾದ್ ಮುದ್ರಜೆ, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಚೆಲ್ಯಡ್ಕ, ರತ್ನಾಕರ ರೈ ಕೆದಂಬಾಡಿ ಗುತ್ತು, ನಿತಿನ್ ಪಕ್ಕಳ, ಪ್ರಗತಿ ಆಸ್ಪತ್ರೆಯ ಡಾ.ಶ್ರೀಪತಿ ರಾವ್, ಮಹಾವೀರ ಆಸ್ಪತ್ರೆಯ ಡಾ.ಪ್ರದೀಪ್, ಡಾ ವಿ.ಕೆ ಹೆಗ್ಡೆ, ಚರ್ಮರೋಗ ತಜ್ಞ ಬದ್ರಿನಾಥ, ಭಾರತೀಯ ಜೀವ ವಿಮಾ ನಿಗದ ಪ್ರಧಾನ ವ್ಯವಸ್ಥಾಪಕ ಬಾಲಕೃಷ್ಣ, ಡಾ. ಸಾತ್ವಿಕ್ ರೈ, ಡಾ. ದಿತೇಶ್, ಡಾ.ಶ್ರೇಯಸ್, ಡಾ.ಪ್ರತೀಕ್, ಡಾ.ರಜತ್ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.


ಲಭ್ಯವಿರುವ ಚಿಕಿತ್ಸೆಗಳು:
ಟ್ರಿಪಲ್ ವೇವ್‌ಲೆಂಥ್ ಡಿಯೋಡ್ ಲೇಸರ್ ಯಂತ್ರದ ಮೂಲಕ ಅನಪೇಕ್ಷಿತ ಕೂದಲುಗಳಿಂದ ರಕ್ಷಣೆ, ಮುಖದಲ್ಲಿರುವ ರಿಂಕಲ್‌ಗಳ ತೆಗೆಯುವಿಕೆ, ಪಿಗ್‌ಮೆಂಟೇಷನ್‌ಗಳಿಂದ ರಕ್ಷಣೆ, ೩೦೮ ಎನ್‌ಎಂ ಎಕ್ಸೈಮರ್ ಲೇಸರ್ ಮೂಲಕ ತೊನ್ನು ರೋಗಕ್ಕೆ ಚಿಕಿತ್ಸೆ, ಸೋರಿಯಾಸಿಸ್, ಎಕ್ಜಿಮಾ/ಡರ್ಮಟಿಟೀಸ್, ಅಟೋಪಿಕ್ ಡೆರ್ಮಟಿಟೀಸ್, ರೇಡಿಯೋ ಫ್ರಿಕ್ವೆನ್ಸಿ ಅಬ್ಲೆಷನ್ ಮೂಲಕ ಸ್ಕಿನ್ ಟ್ಯೂಮರ್‌ಗಳ ತೆಗೆಯುವಿಕೆ, ಮಚ್ಚೆ ತೆಗೆಯುವಿಕೆ ಮತ್ತು ಚರ್ಮದ ಸಣ್ಣ ಸರ್ಜರಿ, ಕೆಮಿಕಲ್ ಪೀಲಿಂಗ್ ಮೂಲಕ ಮೊಡವೆ, ಪಿಗ್ಮೆಂಟೇಷನ್ / ಮೆಲಾಸ್ಮಾ, ಸ್ಕಿನ್ ಲೈಟ್ನಿಂಗ್, ಸ್ಕಿನ್ ರಿಜುವೆನೇಷನ್ ಮತ್ತು ವಯಸ್ಸನ್ನು ಮರೆಮಾಚುವಂತಹ ಚಿಕಿತ್ಸೆ ನೀಡಲಾಗುತ್ತಿದೆ.ಇದರ ಜೊತೆಗೆ ಕೂದಲು ಚಿಕಿತ್ಸೆಗಳಾದ ಕೂದಲು ಉದುರುವಿಕೆಗೆ ಪಿಆರ್‌ಪಿ (ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮಾ) ಥೆರಪಿ, ಮೈಕ್ರೋನೀಡ್ಲಿಂಗ್, ಮೈಕ್ರೋನೀಡ್ಲಿಂಗ್ ಮತ್ತು ಮೆಸೋಥೆರಪಿ ಮೂಲಕ ಕಲೆಗಳ ಹಾಗೂ ರಿಂಕಲ್‌ಗಳ ತೆಗೆಯುವಿಕೆ, ತೊನ್ನು ರೋಗಕ್ಕೆ ಸರ್ಜರಿ ಮೂಲಕ ಮಿನಿಯೇಚರ್ ಪಂಚ್ ಗ್ರಾಫ್ಟಿಂಗ್, ಸುಕ್ಷನ್ ಬ್ಲಿಸ್ಟರ್ ಗ್ರಾಫ್ಟಿಂಗ್, ಅಟೋಲೊಗಸ್ ನಾನ್ ಕಲ್ಚರ್‍ಡ್ ಎಪಿಡರ್‍ಮಲ್ ಸೆಲ್ ಸಸ್‌ಪೆನ್ಷನ್ಸ್, ಚರ್ಮಕ್ಕೆ ಸಂಬಂಧಪಟ್ಟ ಇತರ ಚಿಕಿತ್ಸೆಗಳು ಪಂಚ್ ಮತ್ತು ಶೇವ್ ಬಯೋಪ್ಸಿ, ಲಿಕ್ವಿಡ್ ನೈಟ್ರೋಜನ್ ಕ್ರಿಯೋಥೆರಪಿ, ಕೆಮಿಕಲ್ ಕಾಟೆರಿಷನ್ ಮೊದಲಾದ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಇದೀಗ ಅಲ್ಟ್ರಾ ಶಾರ್ಟ್ ಪಲ್ಸ್ ಟ್ರಿಪಲ್ ವೇವ್‌ಲೆಂಥ್ ಡಿಯೋಡ್ ಲೇಸರ್ ಸಿಸ್ಟಮ್ ಹಾಗೂ 308ಎನ್‌ಎಂ ಎಕ್ಸೈಮರ್ ಲೇಸರ್ ಸಿಸ್ಟಮ್ ಅನ್ನು ಹೊಸದಾಗಿ ಪರಿಚಯಿಸಲಾಗಿದೆ.


ಕಳೆದ ಐದು ವರ್ಷಗಳಿಂದ ಚರ್ಮ ರೋಗಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಜನತೆಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಚರ್ಮದ ಮೇಲಿನ ವಿವಿಧ ರೀತಿಯ ಕಪು, ಬಿಳಿ ಕಲೆಗಳಿ ಚಿಕಿತ್ಸೆ ಪಡೆದಕೊಂಡರೂ ಕೆಲವು ಚರ್ಮರೋಗಳಿಗೆ ಚಿಕಿತ್ಸೆಗೆ ದೂರದ ಮಂಗಳೂರು, ಬೆಂಗಳೂರಿಗೆ ತೆರಳಬೇಕಾಗಿತ್ತು. ಇದಕ್ಕಾಗಿ ಪುತ್ತೂರಿನ ಜನತೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಆಧಾರತಿ ಲೇಸರ್‌ಗಳನ್ನು ಅಳವಡಿಸಿ ಚಿಕಿತ್ಸ ನೀಡಲಾಗುವುದು. ಈ ಅತ್ಯಾಧುನಿಕ ತಂತ್ರಜ್ಷಾನದ ಮೂಲಕ ಸಾಮಾನ್ಯವಾಗಿ ಮಹಿಳೆಯರಿಗೆ ಮುಜುಗರ ಉಂಟುಮಾಡುವಂತೆ ದೇಹದಲ್ಲಿ ಬೆಳೆಯುವ ಅನಪೇಕ್ಷಿತ ಕೂದಲುಗಳನ್ನು ಶಾಶ್ವತ ಇಲ್ಲವಾಗಿಸಲು ಸಾಧ್ಯವಿದೆ. ಜೊತೆಗೆ ತೊನ್ನು, ಸೋರಿಯಾಸಿಸ್, ಎಕ್ಜಿಮಾಕ್ಕೆ ಚಿಕಿತ್ಸೆ ನೀಡಲು ಪರಿಣಾಮಕಾರಿ ಲೇಸರ್ ಚಿಕಿತ್ಸೆ ಪಡೆದುಕೊಳ್ಳಬಹುದು. ಈಗಾಗಲೇ ಚರ್ಮ ಹಾಗೂ ಸೌಂದರ್ಯ ವರ್ಧಕ ಚಿಕಿತ್ಸೆಯಲ್ಲಿ ಗುರುತಿಸಿಕೊಂಡಿರುವ ಪುತ್ತೂರು ಸ್ಕಿನ್ ಕ್ಲಿನಿಕ್, ಲೇಸರ್ ಸೆಂಟರ್ ಹೊಸದಾಗಿ ಲೇಸರ್ ಯಂತ್ರಗಳನ್ನು ಪರಿಚಯಿಸುವ ಮೂಲಕ, ಚರ್ಮದಲ್ಲಿ ಕಾಣಿಸಿಕೊಳ್ಳುವ ಕೆಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಮುಂದಾಗಿದೆ ಎಂದು ಡಾ.ಸಚಿನ್ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here