ನಾಪತ್ತೆಯಾಗಿದ್ದ ಪುಣಚದ ಬಾಲಕೃಷ್ಣ ಪುತ್ತೂರಲ್ಲಿ ಪತ್ತೆ

0

 

ಪುತ್ತೂರು: ನಾಪತ್ತೆಯಾಗಿದ್ದ ಪುಣಚದ ಯುವಕ ಪುತ್ತೂರಿನಲ್ಲಿ ಪತ್ತೆಯಾದ ಬಗ್ಗೆ ವರದಿಯಾಗಿದೆ. ಬಂಟ್ವಾಳ ತಾಲೂಕು ಪುಣಚ ಗ್ರಾಮದ ಅಜೇರುಮಜಲು ನಿವಾಸಿ  ಅಪ್ಪು ಪಾಟಾಳಿರವರ ಪುತ್ರ ಅವಿವಾಹಿತ ಬಾಲಕೃಷ್ಣ(39 ವ.)ರವರು ನಾಪತ್ತೆಯಾಗಿರುವ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ.10 ರಂದು ಪುತ್ತೂರಿನಲ್ಲಿ ಬಾಲಕೃಷ್ಣ ಪತ್ತೆಯಾಗಿದ್ದಾರೆ.

ಇವರು ತನ್ನ ಬ್ಯಾಗ್‌ ಪುತ್ತೂರು ಬಸ್‌ ನಿಲ್ದಾಣದಲ್ಲಿ ಕಳೆದು ಹೋಗಿದೆ ಎಂದು ಪುತ್ತೂರು ನಗರ ಪೊಲೀಸ್‌ ಠಾಣೆಗೆ ದೂರು ನೀಡಲು ಬಂದ ವೇಳೆ, ಪೊಲೀಸರು ಈತನನ್ನು ಗುರುತು ಹಿಡಿದಿದ್ದಾರೆ. ಬಳಿಕ ವಿಟ್ಲ ಠಾಣೆಗೆ ಮಾಹಿತಿ ನೀಡಿ ಮನೆಯವರನ್ನು ಸಂಪರ್ಕಿಸಿದ್ದಾರೆ.

 

LEAVE A REPLY

Please enter your comment!
Please enter your name here