ಶ್ರೀರಕ್ಷೆ ಕನ್ನಡ ಆಲ್ಬಮ್ ಸಾಂಗ್ ಬಿಡುಗಡೆ

0

ಪುತ್ತೂರು: ಅಣ್ಣ ತಂಗಿಯರ ಪವಿತ್ರವಾದ ಬಾಂಧವ್ಯ ಕುರಿತು ಸಂದೇಶ ಸಾರುವ ‘ಸೋದರ- ಸೋದರಿಯ ಬಗೆಗಿನ ಶ್ರೀ ರಕ್ಷೆ ಬಾಂಧವ್ಯದ ತೋಳಿನಲ್ಲಿ..!!’ ಎಂಬ ಶೀರ್ಷಿಕೆಯ ಆಲ್ಬಮ್ ಸಾಂಗ್ ಆ.11ರಂದು ತೆಂಕಿಲ ವಿವೇಕಾನಂದ ಆಂಗ್ಲ‌ ಮಾಧ್ಯಮ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು. ಪುತ್ತೂರು ಜಿಲ್ಲಾ ವಿಶ್ವ ಹಿಂದು ಪರಷದ್ ಅದ್ಯಕ್ಷ ಡಾ. ಕೃಷ್ಣ ಪ್ರಸನ್ನ ಕೆ. ಪೋಸ್ಟರ್ ಅನಾವರಣಗೊಳಿಸಿ ಆಲ್ಬಮ್ ಸಾಂಗ್ ಬಿಡುಗಡೆ ಗೊಳಿಸಿದರು. ಮುಖ್ಯಗುರು ಸತೀಶ್ ಕುಮಾರ್ ರೈ ಮತ್ತಯ ಹಿರಿಯ ಶಿಕ್ಷಕಿ ಪುಷ್ಪಲತಾ ಬಿ.ಕೆ. ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಆಲ್ಬಂ ಸಾಂಗ್ ಗೆ ಹಾಡು ಹಾಡಿರುವ ಶ್ರಿಯಾ ಬಿ.ಸಿ ರೋಡ್, ಶ್ರೀ ವಿದ್ಯಾ ಪಾಣೆಮಂಗಳೂರು ಹಾಗೂ ನಟಿಸಿರುವ ರಸಿಕಾ ಮುರುಳ್ಯರವರಿಗೆ ಸ್ಮರಣಿಕೆ ನೀಡಿ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಆಲ್ಬಮ್ ಸಾಂಗ್ ನಿರ್ದೇಶಕ ಕಾರ್ತಿಕ್ ಕುಮಾರ್ , ಅಚಲ್, ದೀಕ್ಷಿತ್ ವರ್ಮುಡಿ ಇನ್ನಿತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here