ಕಡಬ: ರಕ್ಷಾ ಬಂಧನ ದಿನಾಚರಣೆ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಆ.11ರಂದು ಕಡಬ ಆರಕ್ಷಕ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಮತ್ತು ಠಾಣೆಯ ಎಲ್ಲಾ ಆರಕ್ಷಕರಿಗೆ ರಕ್ಷೆಯನ್ನು ಕಟ್ಟಿ ಸಿಹಿ ಹಂಚಲಾಯಿತು.
ಬಿಜೆಪಿ ಸುಳ್ಯ ಮಂಡಲ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಸರೋಜಿನಿ ಜಯಪ್ರಕಾಶ್, ಪ್ರಧಾನ ಕಾರ್ಯದರ್ಶಿ ತೇಜಸ್ವಿನಿಶೇಖರ ಗೌಡ ಕಟ್ಟಪುಣಿ, ಸದಸ್ಯರಾದ ಸರೋಜಿನಿ ಆಚಾರ್ಯ, ಸುಚೇತಾ ಬರೆಂಬೆಟ್ಟು, ದಿವ್ಯಾಚಂದ್ರಶೇಖರ್ ಆನೆಗುಂಡಿಯವರು ಆರಕ್ಷಕರಿಗೆ ರಕ್ಷೆ ಕಟ್ಟಿ ಶುಭಾಶಯಕೋರಿದರು.