ಬೆಂಗಳೂರಿನಲ್ಲಿ ರೈಲಿಗೆ ಹತ್ತುವಾಗ ಬಿದ್ದು ಕಡಬ ನಿವಾಸಿ ಮೃತ್ಯು

0

ಕಡಬ: ಕಡಬ ನಿವಾಸಿಯೊಬ್ಬರು ಬೆಂಗಳೂರಿನಲ್ಲಿ ರೈಲಿಗೆ ಹತ್ತುವ ವೇಳೆ ಬಿದ್ದು ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ. ಮೃತಪಟ್ಟವರನ್ನು ಅಮೈ ಕೇವಲ ನಿವಾಸಿ ಯತೀಂದ್ರ ಗೌಡ(65) ಎಂದು ಗುರುತಿಸಲಾಗಿದೆ.

ಇವರು ಹೈದರಬಾದ್‌ನಲ್ಲಿ ಹೋಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದು, ಊರಿಗೆ ಬಂದು ವಾಪಾಸ್ಸು ಕೆಲಸಕ್ಕೆ ಹಾಜರಾಗಲು ಹೋಗುವುದಕ್ಕಾಗಿ ಬೆಂಗಳೂರಿನ ಕೆಂಗೇರಿಯಲ್ಲಿ ಮುಂಜಾವಿನ ವೇಳೆ ರೈಲಿಗೆ ಹತ್ತುವಾಗ ಆಯತಪ್ಪಿ ಕೆಳಗೆ ಪ್ಲಾಟ್ ಫಾರಂಗೆ ಬಿದ್ದಿದ್ದಾರೆ. ಬಿದ್ದ ಏಟಿಗೆ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿದೆ. ಮೃತರು ಕಳೆದ 40 ವರ್ಷಗಳಿಂದ ಬೇರೇ ಬೇರೆ ಊರುಗಳಲ್ಲಿದ್ದು, ಕಡಬದಲ್ಲಿ ಇರಲಿಲ್ಲ. ಊರು ಬಿಟ್ಟು 30 ವರ್ಷಗಳ ಬಳಿಕ ಊರಿಗೆ ಬಂದು ಹೋದವರು ಮತ್ತೆ ಹತ್ತು ವರ್ಷಗಳ ಬಳಿಕ ಊರಿಗೆ ಬಂದಿದ್ದರು. ಇತ್ತೀಚೆಗೆ ಆಗಾಗ ಊರಿಗೆ ಬಂದು ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.

LEAVE A REPLY

Please enter your comment!
Please enter your name here