ವಿದ್ಯಾಭಾರತಿ ಜ್ಞಾನವಿಜ್ಞಾನ ಮೇಳ ಜಿಲ್ಲಾ ಮಟ್ಟದ ಸ್ಪರ್ಧೆ: ವಿವೇಕಾನಂದ ಆಂಗ್ಲ ಮಾಧ್ಯಮಕ್ಕೆ ಬಹುಮಾನ

0

ಪುತ್ತೂರು : ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ನಡೆದ ವಿದ್ಯಾಭಾರತಿ ಜ್ಞಾನವಿಜ್ಞಾನ ಮೇಳ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಶಿಶು ವರ್ಗದ ವಿಜ್ಞಾನ ರಸಪ್ರಶ್ನೆಯಲ್ಲಿ ರಚನಾ(೪ನೇ ತರಗತಿ) ಶರಧಿ(೫ನೇ ತರಗತಿ) ಸ್ನೀಗ್ಧ (೫ನೇ
ತರಗತಿ) ಇವರ ತಂಡ ತೃತೀಯ, ಇನ್ನೋವೇಟಿವ್ ಮಾದರಿಯಲ್ಲಿ ಶಮಂತ (೫ನೇ ತರಗತಿ) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಬಾಲವರ್ಗದ ವಿಜ್ಞಾನ ಮಾಡೆಲ್ ಸ್ಪರ್ಧೆಯಲ್ಲಿ ೬ನೇ ತರಗತಿಯ ಅಮೃತ ರಶ್ಮಿ ಸೆನ್ಸರ್ ಬೇಸ್ಡ್ ಮಾಡೆಲ್ ವಿಷಯದಲ್ಲಿ ದ್ವಿತೀಯ, ಏಳನೆಯ ಅನನ್ಯ ಹಾಗೂ ನಿಲಿಶ್ಕ ತಂಡ ಲೈಟ್ ಅಂಡ್ ಇಟ್ಸ್ ಅಪ್ಲಿಕೇಶನ್ ವಿಷಯದಲ್ಲಿ ದ್ವಿತೀಯ, ವಿಜ್ಞಾನ ಪ್ರಯೋಗದಲ್ಲಿ ಲಕ್ಷ್ಮಿ ಯು.(೮ನೇ ತರಗತಿ) ಹಾಗೂ ಜಿ ವೈಷ್ಣವಿ ಪೈ(೮ನೇ ತರಗತಿ)ವಿಜ್ಞಾನ ಪತ್ರ ವಾಚನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕಿಶೋರ ವರ್ಗದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ೧೦ನೇ ತರಗತಿಯ ಧನುಶ್ ರಾಮ್, ಅಭಿರಾಮ್ ಹಾಗೂ ಅಜಯ ರಾಮ್ ತಂಡವು ಪ್ರಥಮ, ವಿಜ್ಞಾನ ಪತ್ರವಾಚನ ಸ್ಪರ್ಧೆಯಲ್ಲಿ ಅರ್ಚನಾ ಕಿಣಿ (೧೦ನೇ),ಇನ್ನೋವೇಟಿವ್ ಮಾಡೆಲ್ ಸ್ಪರ್ಧೆಯಲ್ಲಿ ಪೃಥ್ವಿರಾಜ್ ಪ್ರಭು ೧೦ನೇ ಪ್ರಥಮ ಸ್ಥಾನ ಪಡೆದು ಪ್ರಾಂತ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿಜ್ಞಾನ ಪ್ರಯೋಗದಲ್ಲಿ ೧೦ನೆಯ ಅನ್ವಿತ್ ಎನ್. ತೃತೀಯ,
ಅಪ್ಲಿಕೇಶನ್ spectrum ಆಫ್ ಲೈಟ್ ವಿಜ್ಞಾನಮಾದರಿಯಲ್ಲಿ ತ್ರಿಶೂಲ್ ಹಾಗೂ ಶ್ರೇಯಸ್ (೯ನೇ) ಅವರ ತಂಡ ದ್ವಿತೀಯ, ಮಾನವ ವಿಸರ್ಜನಾಂಗ ಮಾದರಿಯಲ್ಲಿ ಒಂಬತ್ತನೆಯ ಸೃಷ್ಟಿ ತೃತೀಯ ಹಾಗೂ ಅಪ್ಲಿಕೇಶನ್ಸ್ ಆಫ್ ಸೌಂಡ್ ವೇವ್ ಮಾದರಿ ತಯಾರಿಯಲ್ಲಿ ಅಮೋಘ ನಾಯಕ್ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಶಿಶು ವರ್ಗದ ವೇದಗಣಿತ ರಸಪ್ರಶ್ನೆಯಲ್ಲಿ ಐದನೆ ತರಗತಿ ಯ ಧನಿಶ್, ಗೌರವ್, ಸಾನ್ವಿ ಅವರ ತಂಡ ದ್ವಿತೀಯ, ಗಣಿತ ಮಾದರಿಯಲ್ಲಿ ಲಿಖಿತ (೫ನೇ) ಜಿಯೋಮೆಟ್ರಿಕ್ ಶೇಪ್ಸ್ ಮಾದರಿಯಲ್ಲಿ ಪ್ರಥಮ, ಸಿದ್ಧಿ (೫ನೇ) ಮಾಪನ ಮಾದರಿಯಲ್ಲಿ ಪ್ರಥಮ, ಪ್ರಾಪ್ತಿ (೫ನೇ) ಭಿನ್ನ ಮಿತಿಯ ಮಾದರಿಯಲ್ಲಿ ತೃತೀಯ ಹಾಗೂ ಗಣಿತ ಪ್ರಯೋಗದಲ್ಲಿ ಐದನೇ ತರಗತಿಯ ಭವಿಷ್ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ಬಾಲ ವರ್ಗದ ವೇದಗಣಿತ ರಸಪ್ರಶ್ನೆಯಲ್ಲಿ ನಿರೀಕ್ಷಿತ್ ಹೆಗ್ಡೆ ೭ನೇತರಗತಿ, ಶ್ರೇಯಸ್ ವರಂಬಳಿತಾಯ(೮ನೇ) ಸುಶಾಂತ್ ಎ. (೬ನೇ) ಅವರ ತಂಡ ಪ್ರಥಮ, ಗಣಿತ ಮಾದರಿಯಲ್ಲಿ ೭ನೇ ತರಗತಿಯ ಶಮನ್ ಕ್ಷೇತ್ರಫಲ ಹಾಗೂ ಆಯತನ ಮಿತಿಯ ಮಾದರಿಯಲ್ಲಿ ಪ್ರಥಮ, ೮ನೇ ತರಗತಿಯ ವೇದ ವಿ ರೆಗ್ಯುಲರ್ ಪಾಲಿಗನ್ ಆಧಾರಿತ ಮಾದರಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಹಾಗೂ ೮ನೇ ತರಗತಿಯ ಪ್ರೀತಿ ಪಿ. ಪೈ ಗಣಿತ ಪ್ರಯೋಗದಲ್ಲಿ ಪ್ರಥಮ ಸ್ಥಾನ ಪಡೆದು ಪ್ರಾಂತ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಕಿಶೋರ ವರ್ಗದ ಗಣಿತ ಮಾದರಿ ಸ್ಪರ್ಧೆಯಲ್ಲಿ ೧೦ನೇ ತರಗತಿಯ ವಸುಧ ಪೈಥಾಗರಸ್ ಥಿಯರಮ್ ಆಧಾರಿತ ಮಾದರಿಯಲ್ಲಿ ದ್ವಿತೀಯ, ೯ನೇ ತರಗತಿಯ ಹರ್ಷಿಕ ಟ್ರಿಗನಾಮೆಟ್ರಿ ಆಧಾರಿತ ಮಾದರಿಯಲ್ಲಿ ಹಾಗೂ ಧನ್ವಿ (೯ನೇ) ಇನ್ನೋವೇಟಿವ್ ಮಾದರಿಯಲ್ಲಿ ದ್ವಿತೀಯ, ಗಣಿತ ಪ್ರಯೋಗದಲ್ಲಿ ೧೦ನೇ ತರಗತಿಯ ಧಾತ್ರಿ ಸಿ.ಹೆಚ್ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಕಥನ ಸ್ಪರ್ಧೆಯಲ್ಲಿ ಶಿಶು ವಿಭಾಗದ ಕ್ಷಮಾ ಭಟ್ ಹಾಗೂ ಬಾಲ ವರ್ಗದ ದೇವಿ ಪ್ರಣಮ್ಯ ಇವರು ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಅಟಲ್ ಟಿಂಕರಿಂಗ್ ಮಾದರಿ ತಯಾರಿಯಲ್ಲಿ ಹತ್ತನೇ ತರಗತಿಯ ಯುಕ್ತ ಶ್ರೀ ಹಾಗೂ ನೇಹ ಇವರ ತಂಡ ಪ್ರಥಮ, ಎಂಟನೇ ತರಗತಿಯ ಚಿನ್ಮಯಿ ಎಲ್ ಹಾಗೂ ದಿಹರ್ಷ ಇವರ ತಂಡ ಪ್ರಥಮ ಸ್ಥಾನಗಳಿಸಿ ಪ್ರಾಂತ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ ಶಿಶುವರ್ಗದಲ್ಲಿ ಐದನೇ ತರಗತಿಯ ಅನಿಶ್ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ
ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here